Advertisement

ನೀರಾವರಿ ಹಗರಣ: ಅಜಿತ್‌ ಪವಾರ್‌ಗೆ ಮತ್ತೆ ಕ್ಲೀನ್‌ಚಿಟ್‌

10:13 AM Dec 21, 2019 | Team Udayavani |

ಮುಂಬೈ: ವಿದರ್ಭ ನೀರಾವರಿ ಅಭಿವೃದ್ಧಿ ಮಂಡಳಿಯ(ವಿಐಡಿಸಿ) 12 ಯೋಜನೆಗಳಲ್ಲಿ ಹಗರಣ ನಡೆಸಿರುವ ಆಪಾದನೆ ಹೊತ್ತಿದ್ದ ಎನ್‌ಸಿಪಿ ಹಿರಿಯ ಮುಖಂಡ ಅಜಿತ್‌ ಪವಾರ್‌ಗೆ ಮಹಾರಾಷ್ಟ್ರದ ಎಸಿಬಿ ಕ್ಲೀನ್‌ಚಿಟ್‌ ನೀಡಿದೆ.

Advertisement

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಡಿ.19ರಂದು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕ್ಲೀನ್‌ಚಿಟ್‌ ನೀಡಿದೆ. ತನಿಖಾ ವರದಿಯಲ್ಲಿ ಯಾವುದೇ ಅಕ್ರಮ ಎಸಗಿರುವುದು ಕಂಡು ಬಂದಿಲ್ಲ ಎಂದು ತಿಳಿಸಿದೆ.

ನ.27ರಂದು ವಿದರ್ಭ ಭಾಗದಲ್ಲಿ ಕೈಗೊಂಡಿದ್ದ ವಿವಿಧ ನೀರಾವರಿ ಯೋಜನೆಯ ಅವ್ಯವಹಾರ ಪ್ರಕರಣದಲ್ಲೂ ಪವಾರ್‌ಗೆ ಎಸಿಬಿ ಕ್ಲೀನ್‌ಚಿಟ್‌ ನೀಡಿತ್ತು. 1999-2009ರ ವೇಳೆ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮೈತ್ರಿ ಸರ್ಕಾರದಲ್ಲಿ ಅಜಿತ್‌ ಪವಾರ್‌ ಜಲಸಂಪನ್ಮೂಲ ಸಚಿವರಾಗಿದ್ದರು. ಈ ಅವಧಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಿದ್ದು, ಇದರಲ್ಲಿ ಎನ್‌ಸಿಪಿ ಪ್ರಮುಖ ಪಾತ್ರ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next