Advertisement

ಡೋಕ್ಲಾಂನಲ್ಲಿ ಚೀನ ಸೇನೆ ಗಮನಾರ್ಹ ಕಡಿತ: ಸೇನಾ ಮುಖ್ಯಸ್ಥ ರಾವತ್‌

03:49 PM Jan 08, 2018 | udayavani editorial |

ಹೊಸದಿಲ್ಲಿ : ಅರುಣಾಚಲ ಪ್ರದೇಶದೊಳಗೆ ಬಂದು ಭಾರತೀಯ ಭೂ ಪ್ರದೇಶದಲ್ಲಿ ಚೀನ ಕಾರ್ಮಿಕರು ರಸ್ತೆ ನಿರ್ಮಾಣಕ್ಕೆ ತೊಡಗಿದ್ದ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಇಂದು ಸೋಮವಾರ ಹೇಳಿದ್ದಾರೆ.

Advertisement

ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನ ಸೈನಿಕರ ಸಂಖ್ಯೆ ಈಗ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದೂ ಅವರು ಹೇಳಿದರು.

ಅರುಣಾಚಲ ಪ್ರದೇಶದೊಳಗೆ ಅತಿಕ್ರಮಿಸಿ ಬಂದು ರಸ್ತೆ ನಿರ್ಮಾಣಕ್ಕೆ ತೊಡಗಿದ್ದ ಚೀನೀ ಕಾರ್ಮಿಕರ ಪ್ರಕರಣ ಇತ್ಯರ್ಥಗೊಂಡಿದೆ ಎಂದವರು ಇಲ್ಲಿನ ಕಾರ್ಯಕ್ರಮವೊಂದರ ಪಾರ್ಶ್ವದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

ಎರಡು ದಿನಗಳ ಹಿಂದಷ್ಟೆ ಈ ವಿವಾದಿತ ಪ್ರಕರಣವನ್ನು ಕೊನೆಗೊಳಿಸುವ ಸಂಬಂಧವಾಗಿ ಗಡಿ ಸಿಬಂದಿ ಸಭೆ ನಡೆದಿದ್ದು ಪ್ರಕರಣವು ಇತ್ಯರ್ಥಗೊಂಡಿದೆ ಎಂದು ಜನರಲ್‌ ರಾವತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next