Advertisement

ಮನೋಜ್‌ ತಿವಾರಿ ಬಂಗಾಲ ಕ್ರಿಕೆಟ್‌ ತಂಡದ ನಾಯಕ

12:12 PM Jul 29, 2018 | |

ಕೋಲ್ಕತಾ: ತನ್ನನ್ನು ಯಾವುದೇ ದೇಶಿ ಕ್ರಿಕೆಟ್‌ ತಂಡಗಳಲ್ಲಿ ಸೇರಿಸಿಕೊಂಡಿಲ್ಲ ಎಂದು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮನೋಜ್‌ ತಿವಾರಿ ಅವರೀಗ 2018-19ನೇ ಸಾಲಿನ ದೇಶಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬಂಗಾಲ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

Advertisement

ಬಂಗಾಲ ತಂಡದ ಮಾಜಿ ನಾಯಕ ಪ್ರೀತೀಶ್‌ ನಂದಿ ಅಧ್ಯಕ್ಷತೆಯ ನೂತನ ಆಯ್ಕೆ ಸಮಿತಿ ಈ ನೇಮಕ ಮಾಡಿತು. ಸ್ವತಃ ಮನೋಜ್‌ ತಿವಾರಿ ಮತ್ತು ಕೋಚ್‌ ಸಾಯಿರಾಜ್‌ ಬಹುತುಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಹೌದು, ದುಲೀಪ್‌ ಟ್ರೋಫಿ ತಂಡಗಳಿಗೆ ಆಯ್ಕೆ ಮಾಡದೇ ಇದ್ದಾಗ ನನಗೆ ಬೇಸರವಾಗಿತ್ತು. ಆದರೆ ಬಂಗಾಲ ತಂಡದ ನಾಯಕತ್ವದ ಯಾವುದೇ ಅವಕಾಶವನ್ನು ನಾನು ತಪ್ಪಿಸಿಕೊಳ್ಳಲಾರೆ. ಇದೊಂದು ಗೌರವ…’ ಎಂದು ಮನೋಜ್‌ ತಿವಾರಿ ಹೇಳಿದ್ದಾರೆ.ಮುಂದಿನ ಕ್ರಿಕೆಟ್‌ ಋತುವಿಗಾಗಿ ಬಂಗಾಲದ 31 ಸದಸ್ಯರ ಸಂಭಾವ್ಯ ಕ್ರಿಕೆಟ್‌ ತಂಡವನ್ನೂ ಈ ಸಂದರ್ಭದಲ್ಲಿ ಆರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next