Advertisement

ಹೋಳಿಯಲ್ಲಿ ಶಾಂತಿ ಕಾಪಾಡಿ: ಡಿವೈಎಸ್ಪಿ

12:49 PM Mar 13, 2022 | Team Udayavani |

ಭಾಲ್ಕಿ: ಫೆ.18 ಮತ್ತು 19ರಂದು ನಡೆಯಲಿರುವ ಹೋಳಿ ಹಬ್ಬದ ರಂಗಿನಾಟದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಬೇಕು ಎಂದು ಡಿವೈಎಸ್ಪಿ ಜೀನ್ಸ್‌ ಮೈನ್‌ಜೆಸ್‌ ಹೇಳಿದರು.

Advertisement

ಪಟ್ಟಣದ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಶನಿವಾರ ಹೋಳಿ ಹಬ್ಬದ ನಿಮಿತ್ತ ನಡೆದ ರೌಡಿ ಪರೇಡ್‌ ಸಂದರ್ಭದಲ್ಲಿ ಕೆಲವು ರೌಡಿಶೀಟರ್‌ ಗಳನ್ನುದ್ದೇಶಿಸಿ ಅವರು ಮಾತನಾಡಿದರು. ಭಾಲ್ಕಿ ತಾಲೂಕು ಶಾಂತತೆಗೆ ಹೆಸರಾಗಿದೆ. ಇದನ್ನು ಮುಂದೆಯೂ ಕಾಯ್ದುಕೊಂಡು ಹೋಗುವುದು ನಮ್ಮೆಲ್ಲರ ಜಾವಾಬ್ದಾರಿ. ಹೋಳಿ ಹಬ್ಬದ ರಂಗಿನಾಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಎಚ್ಚರದಿಂದ ಇರಬೇಕು. ಅಹಿತಕರ ಘಟನೆಗಳು ಸಂಭವಿಸಿದರೆ ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ. ಹೀಗಾಗಿ ಶಾಂತಿಯಿಂದ ಹೋಳಿ ರಂಗೀನಾಟ ಆಚರಿಸುವಂತೆ ಸಲಹೆ ನೀಡಿದರು.

ಗ್ರಾಮೀಣ ಸಿಪಿಐ ವೀರಣ್ಣ ದೊಡ್ಡಮನಿ ಮಾತನಾಡಿ, ಅಹಿತಕರ ಘಟನೆಗಳು ಸಂಭವಿಸಿದಂತೆ ಎಲ್ಲರೂ ಎಚ್ಚರಿಕೆಯಿಂದ ಹೋಳಿ ಹಬ್ಬ ಆಚರಿಸಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದರು. ಈ ವೇಳೆ ಗ್ರಾಮೀಣ ಪಿಎಸೈ ನಂದಕುಮಾರ ಮುಳೆ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next