Advertisement

ಧುಳೆ : ಐವರನ್ನು ಚಚ್ಚಿ ಕೊಂದ ಪ್ರಕರಣದ ಮುಖ್ಯ ಆರೋಪಿ ಅರೆಸ್ಟ್‌

11:26 AM Jul 05, 2018 | Team Udayavani |

ಧುಳೆ, ಮಹಾರಾಷ್ಟ್ರ : ಮಕ್ಕಳ ಕಳ್ಳರೆಂದು ಶಂಕಿಸಿದ ಉದ್ರಿಕ್ತರ ಗುಂಪೊಂದು ಈ ಜಿಲ್ಲೆಯಲ್ಲಿ ಐವರನ್ನು ಚಚ್ಚಿ ಕೊಂದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ. 

Advertisement

22ರ ಹರೆಯದ ಮಹಾರು ಪವಾರ್‌ ಎಂಬ ಮುಖ್ಯ ಆರೋಪಿಯನ್ನು ನೆರೆಯ ನಂದೂರ್‌ಬಾರ್‌ ಜಿಲ್ಲೆಯಲ್ಲಿ ನಿನ್ನೆ ಬುಧವಾರ ಸೆರೆ ಹಿಡಿಯಲಾಯಿತು ಎಂದು ಧುಳೆ ಎಸ್‌ಪಿ ಎಂ ರಾಮಕುಮಾರ್‌ ತಿಳಿಸಿದ್ದಾರೆ.

ಕಳೆದ ಭಾನುವಾರ ಚಚ್ಚಿ ಕೊಂದ ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡಿದ್ದ  ಪವಾರ್‌, ನಂದೂರ್‌ಬಾರ್‌ನಲ್ಲಿ ಅಡಗಿಕೊಂಡಿದ್ದ ಎಂದವರು ತಿಳಿಸಿದರು. 

ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಐವರನ್ನು ಚಚ್ಚಿಕೊಂದ ಉದ್ರಿಕ್ತ ಗುಂಪಿನ ನೇತೃತ್ವವನ್ನು ಬಂಧಿತ ಪವಾರ್‌ ವಹಿಸಿದ್ದುದು ವೈರಲ್‌ ಆಗಿದ್ದ ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬಂದಿತ್ತು ಎಂದು ಎಸ್‌ಪಿ ರಾಮಕುಮಾರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next