Advertisement

ಮಹಾವೀರ ಜಯಂತಿಯಂದೂ ನಡೆಯಿತು ಮಾಂಸ ಮಾರಾಟ

12:45 PM Apr 10, 2017 | Team Udayavani |

ದಾವಣಗೆರೆ: ಜಗತ್ತಿಗೆ ಅಹಿಂಸಾ ಮಂತ್ರ ಬೋಧಿಸಿದ ವರ್ಧಮಾನ ಮಹಾವೀರರ ಜಯಂತಿಯಂದು ಸರ್ಕಾರಿ ಆದೇಶದಂತೆ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನು ಮಾರಾಟ ನಿಷಿದ್ಧ. ಆದರೆ, ಭಾನುವಾರ ಮಹಾವೀರ ಜಯಂತಿ ಸಂದರ್ಭದಲ್ಲಿ ದಾವಣಗೆರೆಯ ಕೆಲ ಭಾಗದಲ್ಲಿ ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಬೆಲೆಯೇ ನೀಡಲೇ ಇಲ್ಲ.

Advertisement

ಎಂದಿನಂತೆ ಮಾಂಸ, ಮೀನಿನ ಮಾರಾಟ ನಡೆಯಿತು. ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ ಮಾಂಸ ಮಾರಾಟ ನಿಷೇಧ. ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಮಹಾ ನಗರಪಾಲಿಕೆ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ನಗರಪಾಲಿಕೆ ಪ್ರಕಟಣೆ ಹೊರಡಿಸಿತ್ತು. 

ಆದರೆ, ಕೆಲವಾರು ಕಡೆ ಮಾಂಸ, ಮೀನು ಮಾರಾಟ ಕಂಡು ಬಂದಿತು. ಕೆಲವರು ಮಾರಾಟ ಸ್ಥಳಕ್ಕೆ ತೆರಳಿ ಸಂಬಂಂಧಿತ ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಮಾಂಸ, ಮೀನು ಮಾರಾಟ ನಿಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next