Advertisement

ಡಾ|ವೀರೇಂದ್ರ ಹೆಗ್ಗಡೆ ಅವರಿಂದ ಮಹಾವೀರ ಸ್ವಾಮಿ ಪುತ್ಥಳಿ ಅನಾವರಣ

01:21 PM Sep 23, 2018 | Team Udayavani |

ಬೆಳ್ತಂಗಡಿ: ಪುಣೆಯ ಎಂಐಟಿ ವಿಶ್ವ ಶಾಂತಿ ವಿಶ್ವವಿದ್ಯಾನಿಲಯ ಹಾಗೂ ರಾಜ್‌ಬಾಗ್‌ನ ಎಂಐಟಿ ಎಡಿಟಿ ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವವಾರ್‌ಜಿಬಾಗ್‌ನ ಸಂತ ಶ್ರೀ ಧನ್ಯೇಶ್ವರ ವಿಶ್ವ ಶಾಂತಿ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮಹಾಪುರುಷರ ಮೂರ್ತಿಗಳನ್ನು ಅನಾವರಣಗೊಳಿಸಿದ್ದಾರೆ.

Advertisement

ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಗವಾನ್‌ ಮಹಾವೀರ ಸ್ವಾಮಿಯ ಬೃಹತ್‌ ಪುತ್ಥಳಿಯನ್ನು ಅನಾವರಣಗೊಳಿಸಿದರು. ಬಳಿಕ ಇತಿಹಾಸಕಾರ ಶಿವಶಾಹಿರ್‌ ಬಾಬಾ ಸಾಹೇಬ ಪುರಂದರೆ, ಡಾ| ಶಂಕರ ಅಭ್ಯಂಕರ್‌ ಅವರು ಸಮರ್ಥ ರಾಮದಾಸ್‌ ಅವರ, ಯುಜಿಸಿಯ ಮಾಜಿ ಅಧ್ಯಕ್ಷ ಡಾ| ಅರುಣ್‌ ನಿಗ್‌ವೇಕರ್‌ ಅವರು ಮ್ಯಾಕ್ಸ್‌ ಪ್ಲಾಂಕ್‌ ಅವರ, ಪಂ| ಹೃದಯನಾಥ ಮಂಗೇಶ್‌ ಕರ್‌, ಉಷಾ ಮಂಗೇಶ್‌ಕರ್‌ ಅವರು ಸಂತ ಮೀರಾ ಬಾಯಿ, ಸಂತ ಕಬೀರ ಅವರ, ಅಯೋಧ್ಯೆ ರಾಮಜನ್ಮಭೂಮಿ ಶಿಲಾನ್ಯಾಸ ಕಾರ್ಯಕಾರಿ ಮಾಜಿ ಅಧ್ಯಕ್ಷ ಡಾ| ರಾಮ ವಿಲಾಸ ವೇದಾಂತಿ, ಅಯೋಧ್ಯೆಯ ಹನುಮಾನ್‌ಗದ್ದಿಯ ಮಹಂತ ರಾಮದಾಸ್‌ ಅವರು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ತತ್ತ್ವಜ್ಞಾನದ ಸಂಕೇತವಾಗಿರುವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮನ ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು.

ಡಾ| ವಿಜಯ ಪಿ. ಭಾಟ್ಕರ್‌, ಪ್ರೊ| ಸ್ವಾತಿ ಎಂ.ಕರಾಡ್‌ ಚಾಟೆ, ಪ್ರೊ| ರಾಹುಲ್‌ ವಿ. ಕರಾಡ್‌, ಪ್ರೊ| ಜ್ಯೋತಿ ಎ. ಕರಾಡ್‌ ಧಾಕ್ಣೆ, ಡಾ| ವಿಶ್ವನಾಥ್‌ ಡಿ. ಕರಾಡ್‌, ಡಾ| ಮಂಗೇಶ್‌ ಟಿ. ಕರಾಡ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next