Advertisement

ಹತ್ಯೆ ಮಾಡಿ ಸುಡಲು ಬಯಸಿದ್ದರು

06:00 AM Jul 05, 2018 | Team Udayavani |

ಮುಂಬೈ: ಕಳೆದ ಭಾನುವಾರ ಮಹಾರಾಷ್ಟ್ರದ ಧುಲೆಯಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ಐವರನ್ನು ಹತ್ಯೆಗೈದಿದ್ದ ರೇನ್‌ಪಾಡಾ ಜನರು, ಹತ್ಯೆಗೈದ ತಕ್ಷಣ ಅವರನ್ನು ಸುಟ್ಟುಹಾಕಲೂ ಬಯಸಿತ್ತು ಎಂದು ಪೊಲೀಸರು ಹೇಳಿದ್ದಾರೆ.

Advertisement

ನಾಥ ಗೋಸಾಯಿ ಸಮುದಾಯದ ಸಂತ್ರಸ್ತರು ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿದ್ದಾಗ, ಮಕ್ಕಳ ಕಳ್ಳರು ಎಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಪೊಲೀಸರಿಗೆ ಈ ವಿಷಯ ತಿಳಿದು ಸ್ಥಳಕ್ಕೆ ಹೋದಾಗ ಸುಮಾರು 3 ಸಾವಿರ ಜನರು ಸ್ಥಳದಲ್ಲಿ ಸೇರಿದ್ದರು. ಪೊಲೀಸರು ಶವವನ್ನು ವಶಕ್ಕೆ ಪಡೆಯವುದುಕ್ಕೂ ಜನರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ತಕ್ಷಣ ದೇಹವನ್ನು ಸುಟ್ಟುಬಿಡಬೇಕು ಎಂದೂ ಅವರು ಆಗ್ರಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ದೂರು ಬಂದಿತ್ತು. 40 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ 12 ಗಂಟೆಗೆ ತಲುಪಿದೆವು ಎಂದು ಸಹಾಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಯೋಗೇಶ್‌ ಖತ್ಕಲ್‌ ಹೇಳಿದ್ದಾರೆ. ಈಗಾಗಲೇ 23 ಜನರನ್ನು ಈ ಸಂಬಂಧ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next