Advertisement

Maharaja Trophy ಬೆಂಗಳೂರು ಬ್ಲಾಸ್ಟರ್ ಗೆ ಸತತ 5ನೇ ಸೋಲು

11:20 PM Aug 19, 2023 | Team Udayavani |

ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20′ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ಸೋಲಿನ ಆಟ ಮುಂದುವರಿದಿದೆ. ಮಳೆಯಿಂದ ಅಡಚಣೆಗೊಳಗಾದ ಶನಿವಾರದ ಮುಖಾಮುಖೀಯಲ್ಲಿ ಅದು ಮೈಸೂರು ವಾರಿಯರ್ ವಿರುದ್ಧ ವಿಜೆಡಿ ನಿಯಮದಂತೆ 33 ರನ್ನುಗಳ ಆಘಾತಕ್ಕೆ ಸಿಲುಕಿತು. ಇದರೊಂದಿಗೆ ಬೆಂಗಳೂರು ಎಲ್ಲ 5 ಪಂದ್ಯಗಳಲ್ಲೂ ಸೋಲನುಭವಿಸಿದಂತಾಯಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಮೈಸೂರು ವಾರಿಯರ್ 7 ವಿಕೆಟಿಗೆ 185 ರನ್‌ ಗಳಿಸಿದರೆ, ಬೆಂಗಳೂರು ಬ್ಲಾಸ್ಟರ್ 11.1 ಓವರ್‌ಗಳ ಆಟ ಮುಗಿಸಿದಾಗ ಮಳೆ ಸುರಿಯಿತು. ಮುಂದೆ ಆಡಲಾಗಲಿಲ್ಲ. ಆಗ ಮಾಯಾಂಕ್‌ ಅಗರ್ವಾಲ್‌ ಪಡೆ 5 ವಿಕೆಟಿಗೆ 81 ರನ್‌ ಮಾಡಿತ್ತು.
ಮೈಸೂರು ವಾರಿಯರ್ ಪರ ಆರಂಭಕಾರ ಕಾರ್ತಿಕ್‌ ಸಿ.ಎ. 62 ರನ್‌ ಬಾರಿಸಿ ಮಿಂಚಿದರು (43 ಎಸೆತ, 7 ಬೌಂಡರಿ, 2 ಸಿಕ್ಸರ್‌). ಡೆತ್‌ ಓವರ್‌ಗಳಲ್ಲಿ ಮನೋಜ್‌ ಭಾಂಡಗೆ (12 ಎಸೆತಗಳಿಂದ 28 ರನ್‌) ಮತ್ತು ಜಗದೀಶ್‌ ಸುಚಿತ್‌ (14 ಎಸೆತಗಳಿಂದ ಅಜೇಯ 31 ರನ್‌) ಸಿಡಿದು ನಿಂತರು. ಇವರು 3.4 ಓವರ್‌ಗಳಿಂದ 54 ರನ್‌ ರಾಶಿ ಹಾಕಿದ್ದರಿಂದ ತಂಡದ ಮೊತ್ತ ಬೆಳೆಯಿತು. ಕರುಣ್‌ ನಾಯರ್‌ ನಾಯಕತ್ವದ ಮೈಸೂರು ತಂಡ 5 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ ಇದಾಗಿದೆ.

ಚೇಸಿಂಗ್‌ ವೇಳೆ ಬೆಂಗಳೂರು ಬ್ಲಾಸ್ಟರ್ ತೀವ್ರ ಕುಸಿತಕ್ಕೆ ಸಿಲುಕಿತು. 23 ರನ್ನಿಗೆ 3 ವಿಕೆಟ್‌ ಬಿತ್ತು. ಕೀಪರ್‌ ಸೂರಜ್‌ ಅಹುಜ 31 ರನ್‌ ಹೊಡೆದರು.

ಶಿವಮೊಗ್ಗ ವಿರುದ್ಧ ಹುಬ್ಬಳ್ಳಿಗೆ ಜಯ
ದ್ವಿತೀಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 8 ವಿಕೆಟ್‌ ನಷ್ಟಕ್ಕೆ ಕೇವಲ 138 ರನ್‌ ಗಳಿಸಿತು. ಹುಬ್ಬಳ್ಳಿ 16.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 139 ರನ್‌ ಗಳಿಸಿತು. ಹುಬ್ಬಳ್ಳಿ ಪರ ಲವ್‌ನೀತ್‌ ಸಿಸೋಡಿಯ 69 ರನ್‌ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next