Advertisement

Mahalakshmi Case: ಬೆಂಗಳೂರು ಮಹಿಳೆ 30 ಅಲ್ಲ, 50 ಪೀಸ್‌!

12:29 AM Sep 23, 2024 | Team Udayavani |

ಬೆಂಗಳೂರು: ಹೊಸದಿಲ್ಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಲ್ಕರ್‌ ಎಂಬಾಕೆಯನ್ನು ಆಕೆಯ ಪ್ರಿಯಕರ 35 ತುಂಡುಗಳನ್ನಾಗಿ ಮಾಡಿ ಹತ್ಯೆಗೈದಿದ್ದ. ಆದರೆ ಬೆಂಗಳೂರಿನ ಮಾಲ್‌ವೊಂದರ ಸೇಲ್ಸ್‌ಗರ್ಲ್ಸ್‌ ಮಹಾಲಕ್ಷ್ಮಿಯನ್ನು 30 ಅಲ್ಲ, 50 ತುಂಡು ಮಾಡಿ ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಅಲ್ಲದೆ ಆಕೆಯ ಆತ್ಮೀಯ ಸ್ನೇಹಿತನೇ ಕೊಂದು ಪರಾರಿಯಾಗಿದ್ದಾನೆ. ಅದಕ್ಕೆ ಪೂರಕವೆಂಬಂತೆ ಆತನ ಮೊಬೈಲ್‌ ನಂಬರ್‌ ಕೂಡ ಸ್ವಿಚ್‌ ಆಫ್ ಆಗಿದೆ. ಹೀಗಾಗಿ ಪೊಲೀಸರು ಆತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮೃತ ಮಹಿಳೆ ಪತಿ ಹೇಮಂತ್‌ ದಾಸ್‌, ನೆಲಮಂಗಲ ನಿವಾಸಿ ಅಶ್ರಫ್ ಎಂಬಾತನ ಮೇಲೆ ಶಂಕೆ ವ್ಯಕ್ತಪಡಿಸಿದ್ದು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ದೊಡ್ಡ ಸವಾಲು
50ಕ್ಕೂ ಹೆಚ್ಚು ತುಂಡಾಗಿರುವ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು.

ಮೊದಲು ತುಂಡು ತುಂಡಾದ ದೇಹವನ್ನು ಜೋಡಿಸಿಕೊಂಡು, ನಂಬರ್‌ಗಳನ್ನು ಕೊಡಲಾಗಿತ್ತು. ಮೃತದೇಹವನ್ನು ಯಾವ ಆಯುಧದಿಂದ ಕತ್ತರಿಸಲಾಯಿತು ಎಂದು ಪರೀಕ್ಷಿಸಲಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next