Advertisement

ಮಹದೇವಪ್ಪ ತಂತ್ರಗಾರಿಕೆ ನಡೆಯದು

03:47 PM Apr 23, 2018 | Team Udayavani |

ತಿ.ನರಸೀಪುರ: ಜಾತ್ಯತೀತ ಜನತಾದಳ ಪಕ್ಷದ ವರಿಷ್ಠರಾದ ದೊಡ್ಡ ಗೌಡ್ರ ಜೊತೆ ಉತ್ತಮ ಬಾಂಧವ್ಯವಿದೆ ಎಂಬ ನೆಪದಲ್ಲಿ ಜನರನ್ನು ಮೋಡಿ ಮಾಡಲು ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಂತ್ರಗಾರಿಕೆ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಎಂ.ಅಶ್ವಿ‌ನ್‌ಕುಮಾರ್‌ ಹೇಳಿದರು.

Advertisement

ತಾಲೂಕಿನ ದೊಡ್ಡಮುಲಗೂಡು ಗ್ರಾಮದಲ್ಲಿ ಭಾನುವಾರ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮಾತಯಾಚಿಸಿದ ನಂತರ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲುವುದನ್ನು ತಡೆಯಲು ಮಹದೇವಪ್ಪ ಅವರು ಮತದಾರರನ್ನು ಮರಳು ಮಾಡುವ ಮಾತುಗಳನ್ನು ಆಡುತ್ತಿದ್ದಾರೆ. ಶಾಸಕರಾದವರು ಜನರನ್ನು ನಿರ್ಲಕ್ಷ ಭಾವನೆಯಿಂದ ಕಂಡದ್ದಕ್ಕೆ ಬೇಸತ್ತಿರುವುದರಿಂದ ಈ ಬಾರಿ ಜೆಡಿಎಸ್‌ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಚುನಾವಣೆ ಘೋಷಣೆ ಪೂರ್ವದಿಂದಲೂ ಎಲ್ಲಾ ವರ್ಗದ ಜನರನ್ನು ಭೇಟಿಮಾಡಿ ಬೆಂಬಲ ಕೋರಿದ್ದಕ್ಕೆ ಸಕಾರತ್ಮಕ ಸ್ಪಂದನೆ ಸಿಕ್ಕಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕುಮಾರಣ್ಣ ಅವರು ಕೂಡ ಮತ್ತೂಮ್ಮೆ ಕ್ಷೇತ್ರಕ್ಕೆ ಬಂದು ಚುನಾವಣೆ ಪ್ರಚಾರವನ್ನು ಮಾಡುವರು ಎಂದು ತಿಳಿಸಿದರು.

ಜಿನುಗುಡ್ಡೇ ಶ್ರೀಹನುಮಂತರಾಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಂಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಬಿರುಸಿನಿಂದಲೇ ಮತಯಾಚನೆ ಮಾಡಿದರು. ಹಿರಿಯ ಮುಖಂಡ ಚಿಕ್ಕಜವರಪ್ಪ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ಜೆಡಿಎಸ್‌ ಕಾರ್ಯಾಧ್ಯಕ್ಷ ಬಿ.ಆರ್‌.ಮಂಜುನಾಥ್‌, ಜಿಲ್ಲಾ ಉಪಾಧ್ಯಕ್ಷರಾದ ರಂಗಸ್ವಾಮಿ, ವೈ.ಎಸ್‌.ರಾಮಸ್ವಾಮಿ, ಗ್ರಾಪಂ ಸದಸ್ಯರಾದ ಸೋಮರಾಜು, ಸಿದ್ದರಾಜು, ನಾಗರಾಜು, ಮಾಜಿ ಅಧ್ಯಕ್ಷೆ ಯಶೋಧಬಾಬು, ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ತಾಪಂ ಸದಸ್ಯೆ ನಾಗಮಣಿ ಮಹೇಶ್‌, ಎಪಿಎಂಸಿ ಸದಸ್ಯರಾದ ಎನ್‌.ಆರ್‌.ರಾಜೇಶ್‌  ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next