Advertisement

ನ್ಯಾಯಾಧಿಕರಣದಲ್ಲಿಯೇ ಮಹದಾಯಿ ಇತ್ಯರ್ಥ

06:30 AM Jan 11, 2018 | Team Udayavani |

ಪಣಜಿ: ಕರ್ನಾಟಕಕ್ಕೆ ನ್ಯಾಯಯುತವಾಗಿ ಮಹದಾಯಿ ನೀರಿನ ಪಾಲು ಸಿಗುತ್ತದೆ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಈಗ ತಮ್ಮ ಹೇಳಿಕೆ ಬದಲು ಮಾಡಿದ್ದು, ನ್ಯಾಯಾಧಿಕರಣ ದಲ್ಲಿಯೇ ನೀರು ಹಂಚಿಕೆ ವಿಚಾರದ ಬಗ್ಗೆ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

Advertisement

ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ ನೀರಿನ ವಿಚಾರ ಚರ್ಚೆಗೆ
ಬಂದಿದೆಯೇ ಎಂದು ಕೇಳಿದಾಗ ಗೋವಾ ಸಿಎಂ ವಿವಾದವನ್ನು ಸುದ್ದಿಗಾಗಿ ಮಾಧ್ಯಮಗಳೇ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಮಾಡಿವೆ ಎಂದು ದೂರಿದರು. ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ ಗೋವಾ ಸಿಎಂ ಕರ್ನಾಟಕದ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಗೆ ಪತ್ರ ಬರೆದು “ಕರ್ನಾಟಕಕ್ಕೆ ಮಹದಾಯಿ ನೀರು ನೀಡಲು ಗೋವಾ ಸಿದ್ಧ ಈ ಬಗ್ಗೆ ಪರಸ್ಪರ ಮಾತುಕತೆಗೆ ಸಿದಟಛಿ’ ಎಂದು ಹೇಳಿದ್ದರು 

Advertisement

Udayavani is now on Telegram. Click here to join our channel and stay updated with the latest news.

Next