Advertisement

ಮಹದಾಯಿ ವಿವಾದ: ಉಲ್ಟಾ ಹೊಡೆದ ಪರ್ರಿಕ್ಕರ್‌

06:55 AM Jan 19, 2018 | Team Udayavani |

ಪಣಜಿ: ಮಹದಾಯಿ ನದಿಯ 45 ಎಂಎಲ್‌ಡಿ ನೀರನ್ನು ಗೋವಾದಲ್ಲಿ ಕುಡಿಯಲು ಬಳಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಕೃಷಿ ಚಟುವಟಿಕೆಗಾಗಿಯೂ ಇದೇ ನೀರನ್ನು ಬಳಸಲಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಪಾ ನೀರಿನ ಸಂಸ್ಕರಣಾ ಘಟಕ ಹಾಗೂ ಮೈಸಾಳ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ಮಹದಾಯಿ ನೀರನ್ನೇ ಪಡೆಯಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಗೋವಾದಲ್ಲಿ ಮಹದಾಯಿ ನೀರು ಬಳಕೆಯಾಗುತ್ತಿದೆ. ಇಷ್ಟೇ ಅಲ್ಲದೇ ಕೃಷಿ ಕ್ಷೇತ್ರಕ್ಕೆ ಬಳಕೆ ಮಾಡಲು ಅಲ್ಲಲ್ಲಿ ಬಾಂದಾರ ನಿರ್ಮಿಸಿ ನೀರನ್ನು ಪಡೆಯಲಾಗುತ್ತಿದೆ. ಇದೀಗ ಇನ್ನೂ ಕೆಲವೆಡೆ ಬಾಂದಾರ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದರು.

ಮುಖ್ಯಮಂತ್ರಿ ಪರ್ರಿಕರ್‌ ಕರ್ನಾಟಕಕ್ಕೆ ಪತ್ರ ಬರೆದ ನಂತರ ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಬಿಡುವುದು ಅನಿವಾರ್ಯವಾಗಿದೆ ಎಂದು ಮತ್ತೆ ಹೇಳಿಕೆ ನೀಡಿದ್ದರು. ಆದರೆ, ಇದೀಗ ಇವೆಲ್ಲವನ್ನೂ ಬುಡಮೇಲು ಮಾಡುವ ರೀತಿಯಲ್ಲಿ ಉಲ್ಟಾ ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next