Advertisement

ಬೈಕಿನ ಮೇಲೆ ಉರುಳಿ ಬಿದ್ದ ಟ್ರಕ್‌: ದಂಪತಿ,ಇಬ್ಬರು ಮಕ್ಕಳ ದಾರುಣ ಸಾವು

04:08 PM Nov 09, 2018 | udayavani editorial |

ಮುಂಬಯಿ : ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಸಕ್ಕರೆ ಗೋಣಿ ಸಾಗಿಸುತ್ತಿದ್ದ ಟ್ರಕ್‌ ಒಂದು ಮೋಟಾರ್‌ ಸೈಕಲ್‌ ಮೇಲೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

Advertisement

ಮಜಲಗಾಂವ್‌ – ಪರ್ಭಾನಿ ಹೈವೇಯಲ್ಲಿ ಈ ದುರಂತ ಸಂಭವಿಸಿದೆ. ಟ್ರಕ್ಕು ಮೋಟಾರ್‌ ಬೈಕನ್ನು ಹಿಂದಿಕ್ಕಲು ಯತ್ನಿಸುವ ಭರದಲ್ಲಿ ಆಯ ತಪ್ಪಿ ಬೈಕಿನ ಮೇಲೆಯೇ ಉರುಳಿ ಬಿತ್ತು. ಪರಿಣಾಮವಾಗಿ ಬೈಕಿನಲ್ಲಿದ್ದ  ಗಂಡ, ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳು ಟ್ರಕ್ಕಿನಡಿ ಅಪ್ಪಚ್ಚಿಯಾಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು. 

ಮೃತರನ್ನು ದಯಾನಂದ ಸೋಲ್ನಖೆ (42), ಆತನ ಪತ್ನಿ ಸಂಗೀತಾ (35) ಮತ್ತು ಅವರ ಮಕ್ಕಳಾದ ಪೃಥ್ವಿರಾಜ್‌ (12) ಹಾಗೂ ರಾಜನಂದಿನಿ (10) ಎಂದು ಗುರುತಿಸಲಾಗಿದೆ. 

ಇದೇ ಅವಘಡಕ್ಕೆ ಸಿಲುಕಿದ ಮತ್ತೂಂದು ಬೈಕಿನಲ್ಲಿದ್ದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದರು. ಟ್ರಕ್‌ ಚಾಲಕ ರೂಪೇಶ್‌ ಯಾದವ್‌ (30) ಎಂಬಾತನನ್ನು ಪೊಲೀಸರು ಬಂಧಿಸಿ, ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next