Advertisement

NCP ಒಂದಾಗಿ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ ಡಿಸಿಎಂ ಪವಾರ್ ಮತ್ತು ಬಣ

06:39 PM Jul 16, 2023 | Team Udayavani |

ಮುಂಬಯಿ:’‘ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಎನ್‌ಸಿಪಿಯ ಅಜಿತ್ ಪವಾರ್ ಮತ್ತು ಅವರ ಬಣದ ಕೆಲವು ಸಚಿವರು ಭಾನುವಾರ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಎನ್ ಸಿಪಿ ಯನ್ನು ಒಗ್ಗೂಡಿಸುವಂತೆ ಮನವಿ ಮಾಡಿದ್ದಾರೆ” ಎಂದು ಪಕ್ಷದ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.

Advertisement

”ಎನ್‌ಸಿಪಿ ಮುಖ್ಯಸ್ಥರು ತಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ” ಎಂದು ಪಟೇಲ್ ಸುದ್ದಿಗಾರರಿಗೆ ಹೇಳಿದರು.

ಎರಡು ಬಣಗಳ ನಡುವಿನ ಈ ಅನಿರೀಕ್ಷಿತ ಸಭೆಯು ಅಜಿತ್ ಪವಾರ್ ಅವರು ಬಂಡಾಯವೆದ್ದು ಜುಲೈ 2 ರಂದು ಶಿವಸೇನೆ-ಬಿಜೆಪಿ ಸರಕಾರಕ್ಕೆ ಸೇರಿದ ನಂತರ ಮೊದಲನೆಯದಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಈ ಬೆಳವಣಿಗೆ ಕುತೂಹಲ ಮೂಡಿಸಿದ್ದು ಶರದ್ ಪವಾರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next