Advertisement

ಜಾನುವಾರುಗಳಿಗೆ ಮೇವು ಹಾಕದ್ದಕ್ಕೆ ಮಗನನ್ನು ಕೊಚ್ಚಿ ಕೊಂದ ಅಪ್ಪ!

05:45 PM Jun 28, 2020 | keerthan |

ಬೆಳಗಾವಿ: ದನ-ಕರುಗಳಿಗೆ ಮೇವು ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮಗನ ಮೇಲೆ ಸಿಟ್ಟಾದ ತಂದೆ ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ಹೃದಯವಿದ್ರಾವಕ ಘಟನೆ ಗೋಕಾಕ ತಾಲೂಕಿನ ಮೇಲ್ಮಟ್ಟಿಯಲ್ಲಿ ನಡೆದಿದೆ.

Advertisement

ಗೋಕಾಕ ತಾಲೂಕಿನ ಮೇಲ್ಮಟ್ಟಿಯ ಯಮನಪ್ಪ ಬಾಲಪ್ಪ ಗುತ್ತಿಗೆ (41) ಹತ್ಯೆಗೀಡಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಜಾನುವಾರುಗಳಿಗೆ ಮೇವು ಹಾಕುವ ವಿಚಾರದಲ್ಲಿ ತಂದೆ-ಮಗನ ಮಧ್ಯೆ ಗಲಾಟೆ ಆಗಿದ್ದು, ಜಗಳ ವಿಕೋಪಕ್ಕೆ‌ ತಿರುಗಿ ಮಗನನ್ನು ತಂದೆ ಬಾಲಪ್ಪ ಹೊಡೆದು ಕೊಲೆ ಮಾಡಿದ್ದಾರೆ.

ಮಗನಿಗೆ ಕೊಡಲಿಯಿಂದ ಹೊಡೆದಿದ್ದರಿಂದ ಮಗನನ್ನು ಕೂಡಲೇ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆ ತರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಆರೋಪಿ ತಂದೆ ಬಾಲಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆಸ್ತಿ ವಿವಾದ: ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ ಮಗನನ್ನೇ ಕೊಂದ ತಂದೆ!

Advertisement

Udayavani is now on Telegram. Click here to join our channel and stay updated with the latest news.

Next