Advertisement

ಅಲೆಮಾರಿಗಳಿಗೆ ಸೌಲಭ್ಯ ಕೊಡಿ

03:50 PM Oct 19, 2021 | Team Udayavani |

ಮಾಗಡಿ: ನಿರಂತರವಾಗಿ ಸುರಿಯುತ್ತಿರುವಮಳೆಗೆ ಅಲೆಮಾರಿಗಳ ಬದುಕು ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಪಟ್ಟಣದ ಹೊಸಪೇಟೆ ರಸ್ತೆ ಬದಿ ಅಲೆಮಾರಿಗಳು ಪ್ಲಾಸ್ಟಿಕ್‌ ಗುಡಿಸಲುಹಾಕಿಕೊಂಡು ಭಿಕ್ಷೆ ಬೇಡಿ ಬದುಕಿನ ಬಂಡಿಸಾಗಿಸುತ್ತಿದ್ದರು.

Advertisement

ನಿರಂತರವಾಗಿ ಮಳೆಸುರಿಯುತ್ತಿರುವುದರಿಂದ ಗುಡಿಸಲಿಗೆ ಮಳೆನೀರು ನುಗ್ಗಿದ್ದು, ಭಿಕ್ಷೆ ಬೇಡಿ ಗುಡಿಸಿಲಿನಲ್ಲಿಇಟ್ಟಿಕೊಂಡಿದ್ದ ದವಸ ಧಾನ್ಯ ಮಳೆ ನೀರಿನಿಂದಒದ್ದೆಯಾಗಿ ಮೊಳಕೆಯೊಡೆಯುತ್ತಿದೆ.ಇದನ್ನು ತಿನ್ನಲಾಗದೆ ಹಸಿವಿನಿಂದ ಸಮಯದೂಡುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸಂಬಂಧ ಪಟ್ಟ ತಾಲೂಕು ಆಡಳಿತ ಇತ್ತಗಮನಹರಿಸಿ ಅಲೆಮಾರಿಗಳಿಗೆ ಅಗತ್ಯ ಸೌಕರ್ಯಹಾಗೂ ಸವಲತ್ತು ನೀಡಬೇಕೆಂದು ಈ ಭಾಗದನಾಗರಿಕರ ಆಗ್ರಹವಾಗಿದೆ. ಮಳೆ ಮಂದುವರಿದರೆಅಲೆಮಾರಿಗಳು ಮತ್ತಷ್ಟು ತೊಂದರೆಗೆ ಒಳಗಾಗುವಸಂಭವವಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next