Advertisement

ಕಬಡ್ಡಿ: ಹುಳ್ಳೇನಹಳ್ಳಿ ತಂಡ ಪ್ರಥಮ

05:51 PM May 24, 2022 | Team Udayavani |

ಮಂಡ್ಯ: ನಗರದ ಹೊಸಹಳ್ಳಿ ಶ್ರೀ ರಾಮಮಂದಿರದ ಆವರಣದಲ್ಲಿ ಮಾರಿಗುಡಿಗೆಳೆಯರ ಬಳಗ, ರಾಮನಹಳ್ಳಿ ಮತ್ತುಹೊಸಹಳ್ಳಿ ಗ್ರಾಮಸ್ಥರ ವತಿಯಿಂದ ಶ್ರೀಬಿಸಿಲು ಮಾರಮ್ಮ ದೇವಿ ಹಬ್ಬದಅಂಗವಾಗಿ ನಡೆದ ವಿಶ್ವೇಶ್ವರಯ್ಯ ಕಪ್‌2022 ಪ್ರಥಮ ವರ್ಷದ ವಿಭಾಗ ಮಟ್ಟದಪುರುಷರ ಕಬಡ್ಡಿ ಪಂದ್ಯದಲ್ಲಿ ಹುಳ್ಳೇನಹಳ್ಳಿತಂಡ ಪ್ರಥಮ ಬಹುಮಾನ ಪಡೆಯಿತು.

Advertisement

ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ:ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದಕಾಂಗ್ರೆಸ್‌ ಮುಖಂಡ ಡಾ.ಕೃಷ್ಣ, ದೇಸಿಕ್ರೀಡೆ ಕಬಡ್ಡಿ ಎಲ್ಲರ ಮನಗೆದ್ದಿದೆ. ಇದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯವಾಗುತ್ತದೆ ಎಂದು ಸಲಹೆನೀಡಿದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ, ಮೈಸೂರುವಿಭಾಗ ಮಟ್ಟದಲ್ಲಿ 50 ತಂಡಆಗಮಿಸಿರುವುದು ಮಂಡ್ಯದ ಹೆಮ್ಮೆಯವಿಷಯ. ಯಾವುದೇ ಕ್ರೀಡಾಪಟುಗಳಿಗೆಸೋಲು ಗೆಲುವು ಮುಖ್ಯವಾಗದೆಭಾಗವಹಿಸುವಿಕೆ ಮುಖ್ಯವಾಗಬೇಕುಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next