Advertisement

ರೈತರ ಆದಾಯ ಹೆಚ್ಚಳಕ್ಕೆ ಸಂಶೋಧನೆ ಅಗತ್ಯ: ಶಾಸಕ

09:28 PM Jul 18, 2021 | Team Udayavani |

ಮಂಡ್ಯ: ಹೆಚ್ಚಿನ ಸಂಶೋಧನೆಯಿಂದ ರೈತರ ನೆರವಿಗೆಕೃಷಿ ವಿಜಾnನಿಗಳು ಧಾವಿಸುವ ಮೂಲಕ ರೈತರಆದಾಯ ಹೆಚ್ಚುವಂತೆ ಮಾಡಬೇಕು ಎಂದು ಶಾಸಕಸಿ.ಎಸ್‌.ಪುಟ್ಟರಾಜು ಹೇಳಿದರು.

Advertisement

ತಾಲೂಕಿನ ವಿ.ಸಿ.ಫಾರಂನ ಡಾ.ಲೆಸ್ಲಿ ಸಿ.ಕೋಲ್ಮನ್‌ಹಾಲ್‌ನಲ್ಲಿ ಬೆಂಗಳೂರು ಕೃಷಿ ವಿವಿ, ವಲಯ ಕೃಷಿಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಆತ್ಮ ಯೋಜನೆ,ಕೃಷಿ ಇಲಾಖೆ, ರಾಷ್ಟ್ರೀಯಕೃಷಿ ವಿಸ್ತರಣಾ ನಿರ್ವಹಣಾಸಂಸ್ಥೆ ವತಿಯಿಂದ ನಡೆದ ಕೃಷಿ ಪರಿಕರಗಳಉದ್ದಿಮೆದಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿಡಿಪ್ಲೋಮಾ ಪ್ರಮಾಣ ಪತ್ರ ಪ್ರದಾನ ಸಮಾರಂಭಉದ್ಘಾಟಿಸಿ ಮಾತನಾಡಿದರು.

ರಸಾಯನಿಕ ಬಳಕೆಯಿಂದ ಕೃಷಿಗೆ ರೋಗಬಾಧೆ:ಒಂದುಕಡೆ ಜನರನ್ನುಕೋವಿಡ್‌-19 ಬಾದಿಸುತ್ತಿದ್ದರೆ,ಮತ್ತೂಂದೆಡೆ ಅತ್ಯಧಿಕ ಪ್ರಮಾಣದ ರಸಾಯನಿಕಗಳಬಳಕೆಯಿಂದಾಗಿ ಕೃಷಿಯೂ ರೋಗಬಾಧೆಯಿಂದನರಳುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿ ವಿಜಾnನಿಗಳುಹೆಚ್ಚಿನ ಸಂಶೋಧನೆಯಲ್ಲಿ ತೊಡಗುವ ಮೂಲಕರೈತರ ನೆರವಿಗೆ ಧಾವಿಸಬೇಕು ಎಂದು ಸಲಹೆನೀಡಿದರು.

ಕೃಷಿ ವಿಜಾnನಿಗಳ ಜವಾಬ್ದಾರಿ ಹೆಚ್ಚು: ದೇಶದಲ್ಲಿಶೇ.70ರಿಂದ 80ರಷ್ಟು ಕೃಷಿಯನ್ನೇ ನಂಬಿ ಜೀವನನಡೆಸುತ್ತಿದ್ದಾರೆ. ಈ ಹಿನ್ನೆಲೆ ಈ ಕ್ಷೇತ್ರದಲ್ಲಿ ಹೆಚ್ಚಿನಸಂಶೋಧನೆ ನಡೆಯುವಂತಾಗಬೇಕು.

ಕೋವಿಡ್‌ನಿಂದಾಗಿ ಎಲ್ಲಾ ಕ್ಷೇತ್ರದ ಮೇಲೂ ಪರಿಣಾಮಉಂಟಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವ ಕಾರಣಕೃಷಿ ವಿಜಾnನಿಗಳು ಜವಾಬ್ದಾರಿಯುತವಾಗಿ ಕೆಲಸಮಾಡುವುದು ಅಗತ್ಯ ಎಂದರು.

Advertisement

ಕೃಷಿ ಉದ್ದಿಮೆದಾರರ ಪಾತ್ರ ಹೆಚ್ಚು: ಬೆಂಗಳೂರುಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರಪ್ರಸಾದ್‌ಮಾತನಾಡಿ, ಹಿಂದೆಲ್ಲ ಹಳ್ಳಿಗಳಲ್ಲಿ ಗ್ರಾಮ ಸೇವಕರುಕೆಲಸ ಮಾಡುತ್ತಿದ್ದರು. ಅವರಿಂದ ರೈತರು ಮಾಹಿತಿಪಡೆದು ಉತ್ತಮ ಕೃಷಿ ಮಾಡುತ್ತಿದ್ದರು.

ಆದರೆ ಈಗಅಂಥ ಪದ್ಧತಿ ಇಲ್ಲ. ಈ ಹಿನ್ನೆಲೆ ಕೃಷಿ ಉದ್ದಿಮೆದಾರರೇರೈತರಿಗೆ ಮಾಹಿತಿ ನೀಡಬೇಕಾಗಿದೆ ಎಂದು ಹೇಳಿದರು.ಉತ್ತಮ ಬಾಂಧವ್ಯ ಮುಖ್ಯ: ಈ ಹಿನ್ನೆಲೆಯಲ್ಲಿ ಕೃಷಿಉದ್ದಿಮೆದಾರರಿಗೆ ಡಿಪ್ಲೋಮಾ ತರಬೇತಿ ನೀಡುತ್ತಿದ್ದು,ತರಬೇತಿ ಪಡೆದ ಉದ್ದಿಮೆದಾರರು ರೈತರೊಂದಿಗೆಉತ್ತಮ ಬಾಂಧವ್ಯ ಇಟ್ಟುಕೊಂಡು ಗ್ರಾಮ ಸೇವಕರರೀತಿಯಲ್ಲಿ ಮಾರ್ಗದರ್ಶನ ನೀಡಬೇಕು.ಅದರೊಂದಿಗೆ ವ್ಯವಹಾರವನ್ನು ವೃದ್ಧಿಸಿಕೊಳ್ಳುವುದರಜತೆಗೆ ರೈತರಿಗೂ ಅನುಕೂಲ ಮಾಡಿಕೊಡಬೇಕುಎಂದು ಸಲಹೆ ನೀಡಿದರು.

ಸಮಾರಂಭದಹಿನ್ನೆಲೆಯಲ್ಲಿಕಚೇರಿಆವರಣದಲ್ಲಿ ಸಸಿನೆಡಲಾಯಿತು. ಹಿರಿಯ ನಿವೃತ್ತ ವಿಜಾnನಿ ಪ್ರೊ.ಗುಬ್ಬಯ್ಯಶಿಬಿರಾರ್ಥಿಗಳಿಗೆ ಪ್ರಮಾಣಪತ್ರವಿತರಿಸಿದರು.ಕೃಷಿ ವಿವಿ ಕುಲಸಚಿವ ಡಾ.ಎನ್‌.ದೇವಕುಮಾರ್‌,ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ,ಜಂಟಿ ಕೃಷಿ ನಿರ್ದೆಶಕ ಡಾ.ಬಿ.ಎಸ್‌.ಚಂದ್ರಶೇಖರ್‌,ಡೀನ್‌ ಡಾ.ವೆಂಕಟೇಶ್‌, ಸಿಡಾಕ್‌ ಸಂಸ್ಥೆಯ ಜಂಟಿನಿರ್ದೇಶಕ ಅಶ್ವಿ‌ನ್‌ಕುಮಾರ್‌, ಕ್ಷೇತ್ರ ಅಧೀಕ್ಷಕಡಾ.ತಿಮ್ಮೇಗೌಡ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next