Advertisement

ಬಾಗಿಲು ತೆರೆದ ಎಐಎಡಿಎಂಕೆ ಕಚೇರಿ

09:52 PM Jul 21, 2022 | Team Udayavani |

ಚೆನ್ನೈ: ಪಕ್ಷದ ನಡುವಿನ ಎರಡು ಬಣಗಳ ಕಿತ್ತಾಟದ ಕಾರಣ ಸೀಲ್‌ ಮಾಡಲಾಗಿದ್ದ ಎಐಎಡಿಎಂಕೆ ಕಚೇರಿಯನ್ನು ಗುರುವಾರ ಬಾಗಿಲು ತೆರೆಯಲಾಗಿದೆ.

Advertisement

ತಮಿಳುನಾಡಿನ ಚೆನ್ನೈನಲ್ಲಿನಲ್ಲಿದ್ದ ಕಚೇರಿಯನ್ನು ಕಂದಾಯ ಅಧಿಕಾರಿಗಳು ಜು.11ರಂದು ಸೀಲ್‌ ಮಾಡಿದ್ದರು. ಕೆ.ಪಳನಿಸ್ವಾಮಿ ಮತ್ತು ಒ.ಪನ್ನೀರಸೆಲ್ವಂ ನಡುವೆ ಅಧಿಕಾರದ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ಆ ಹಿನ್ನೆಲೆ ಕಂದಾಯ ಅಧಿಕಾರಿಗಳು ಕಚೇರಿಯನ್ನು ಸೀಲ್‌ ಮಾಡಿದ್ದರು.

ಕಚೇರಿಯ ಬಾಗಿಲನ್ನು ತೆರೆಯುವಂತೆ ಕಂದಾಯ ಅಧಿಕಾರಿಗಳಿಗೆ ಮದ್ರಾಸ್‌ ಹೈ ಕೋರ್ಟ್‌ ಬುಧವಾರ ಆದೇಶಿಸಿತ್ತು.

ಗುರುವಾರ ಪಕ್ಷದ ಮುಖ್ಯಸ್ಥರು ಮತ್ತು ಪೊಲೀಸರ ಸಮ್ಮುಖದಲ್ಲಿ ಸೀಲ್‌ ತೆಗೆದುಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next