Advertisement

ಮಡಿಕೇರಿ: ಮೆಡಿಕಲ್‌ ಕಾಲೇಜ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ

09:37 PM Aug 01, 2019 | Sriram |

ಮಡಿಕೇರಿ: ಎನ್‌ಎಂಸಿ ಕಾಯಿದೆ ಜಾರಿಗೊಳಿಸಿರುವ ಸರಕಾರದ ಕ್ರಮವನ್ನು ಖಂಡಿಸಿ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿಗಳು ಸಾಕಷ್ಟು ವಿದ್ಯಾರ್ಥಿಗಳು ವೈದ್ಯರಾಗಬೇಕೆಂಬ ಆಸೆಯಿಂದ ಮೆಡಿಕಲ್‌ ಕಾಲೇಜು ಸೇರುತ್ತಾರೆ. ಹೆಚ್ಚಿನ ಶುಲ್ಕ ಪಾವತಿಸಿ 4-5 ವರ್ಷ ಓದಿ ನಂತರ 1 ವರ್ಷ ತರಬೇತಿ ಆದ ಬಳಿಕವಷ್ಟೇ ಉದ್ಯೋಗ ದೊರೆಯುತ್ತದೆ. ಆದರೆ ಎನ್‌ಎಂಸಿ ಕಾಯಿದೆಯಿಂದ ಅನಧಿಕೃತ ವ್ಯಕ್ತಿಗಳು ಕೇವಲ 6 ತಿಂಗಳಿನಲ್ಲಿ ಲೈಸನ್ಸ್‌ ಪಡೆದರೆ ಆಧುನಿಕ ವೈದ್ಯ ಪದ್ಧತಿಯ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಪ್ರಾಮಾಣಿಕವಾಗಿ ವ್ಯಾಸಂಗ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುವುದಲ್ಲದೆ ಸಾರ್ವ ಜನಿಕರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆರೋ ಪಿಸಿದರು. ಮಸೂದೆಗೆ ತಿದ್ದು ಪಡಿ ತಂದು ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ಹಸನುಗೊಳಿಸಬೇಕೆಂದು ಒತ್ತಾಯಿಸಿದರು. ಪ್ರೇರಣ, ದರ್ಶನ್‌, ಪ್ರವೀಣ್‌, ಐಶ್ವರ್ಯ, ವಂದನಾ, ಸುಹಾಸ್‌, ಸಹನಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next