Advertisement

ಮಡಿಕೇರಿ: ಗುಂಡೇಟು ತಗುಲಿ ಬೇಟೆಗೆ ತೆರಳಿದಾತ ಸಾವು; ಇಬ್ಬರು ಶರಣು

10:40 AM Apr 25, 2022 | Team Udayavani |

ಮಡಿಕೇರಿ: ಬೇಟೆಗೆಂದು ಕಾಡಿಗೆ ಹೋದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ಸಂಭವಿಸಿದೆ.

Advertisement

ವೀರಾಜಪೇಟೆಯ ಗುಂಡಿಕೆರೆ ನಿವಾಸಿ ಹಮೀದ್‌ (35) ಗುಂಡೇಟಿಗೆ ಮೃತಪಟ್ಟಿದ್ದಾರೆ. ಹಮೀದ್‌ ಸೇರಿದಂತೆ ಮೂವರು ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದು, ಈ ಸಂದರ್ಭ ಹಮೀದ್‌ ಅವರಿಗೆ ಆಕಸ್ಮಿಕವಾಗಿ ಗುಂಡು ತಗಲಿದೆ ಎನ್ನಲಾಗಿದೆ. ಜತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್‌ ಪೊಲೀಸರಿಗೆ ಶರಣಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಟೆಗೆ ಹೋದವರಲ್ಲಿ ಇನ್ನೂ ಹಲವರಿದ್ದರು ಎಂದು ಆರೋಪವಿದ್ದು ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next