Advertisement

ಮಡಿಕೇರಿ: ಮಾದಕ ವಸ್ತು ಸಾಗಾಟ…ನಾಲ್ವರ ಬಂಧನ

11:19 PM Apr 16, 2023 | Team Udayavani |

ಮಡಿಕೇರಿ: ಮಾದಕ ವಸ್ತುಗಳಾದ ಚರಸ್‌ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ವಿರಾಜಪೇಟೆ ಅಬಕಾರಿ ಇಲಾಖೆ ಸಿಬಂದಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪೊನ್ನಂಪೇಟೆ ತಾಲೂಕಿನ ಕಾರ್ಮಾಡು ಚೆಕ್‌ಪೋಸ್ಟ್‌ ನಲ್ಲಿ ಚುನಾವಣ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬಂದಿ ಕಾರೊಂದನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತುಗಳು ಪತ್ತೆಯಾಗಿದೆ. ಅಲ್ಲದೆ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ತತ್‌ಕ್ಷಣ ಕಾರ್ಯಪ್ರವೃತ್ತರಾದ ಸಿಬಂದಿ10 ಗ್ರಾಂ ಚರಸ್‌, 35 ಗ್ರಾಂ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.

ಆರೋಪಿಗಳಾದ ತಮಪ್ಪ ಸರ್ಕಾರ್‌, ಬೀಬವ್‌, ದೇವಾಂಸ್‌ ಶರ್ಮಾ ಹಾಗೂ ಆದಿತ್ಯ ಕುಮಾರ್‌ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿರಾಜಪೇಟೆ ಉಪ ವಿಭಾಗ ಕಚೇರಿಯ ಅಬಕಾರಿ ಉಪ ಅಧೀಕ್ಷಕ‌ ಎಂ.ಎನ್‌. ನಟರಾಜು, ಸಿಬಂದಿ ಎನ್‌. ಜಿ. ಮದನ್‌ ಕುಮಾರ್‌, ಸಂತೋಷ್‌, ಚಾಲಕ ದರ್ಶನ್‌ ಪೊಲೀಸ್‌ ಸಿಬಂದಿ ಸಂತೋಷ್‌ ಕುಮಾರ್‌, ಅರಣ್ಯ ಇಲಾಖಾ ಸಿಬಂದಿ ಉದಯಕುಮಾರ್‌ ಮತ್ತಿತರ ಸಿಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next