Advertisement

ಮಡಿಕೇರಿಯಲ್ಲಿ ದನಗಳ ಅಕ್ರಮ ಸಾಗಾಟ: ಇಬ್ಬರ ಸೆರೆ, 7 ದನ ರಕ್ಷಣೆ

12:56 AM Jan 15, 2023 | Team Udayavani |

ಮಡಿಕೇರಿ: ಗೋವುಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಇಬ್ಬರನ್ನು ಪೆರುಂಬಾಡಿ ಗ್ರಾಮದಲ್ಲಿ ಬಂಧಿಸಿರುವ ಪೊಲೀಸರು ಒಂದು ಕರು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ.

Advertisement

ಕೇರಳದ ಕಣ್ಣೂರು ಜಿಲ್ಲೆಯ ಕೈಯರಾಳಂ ಗ್ರಾಮದ ಎನ್‌.ಪಿ. ಸೈನುದ್ದೀನ್‌ (38) ಮತ್ತು ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ಪರ್ವಿಜ್‌ ಬಾಷ (35) ಬಂಧಿತರು.

ಪಿರಿಯಾಪಟ್ಟಣದಿಂದ ಲಾರಿಯಲ್ಲಿ ಗೋವುಗಳನ್ನು ತುಂಬಿ ಕೊಂಡು ಗೋಣಿಕೊಪ್ಪಲು, ಪೆರುಂಬಾಡಿ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದರು. ಪೆರುಂಬಾಡಿ ತಪಾಸಣೆ ಕೇಂದ್ರದಲ್ಲಿ ಪರಿಶೀಲನೆ ಮಾಡಿದಾಗ ಅಕ್ರಮ ಸಾಗಾಟ ಪತ್ತೆಯಾಯಿತು. ಬಂಧಿತರ ವಿರುದ್ಧ ವೀರಾಜಪೇಟೆ ನಗರ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀರಾಜಪೇಟೆ ನಗರ ಠಾಣಾಧಿಕಾರಿ ಶ್ರೀàಧರ್‌ ಮತ್ತು ಎಎಸ್‌ಐ ನಾಣಿಯಪ್ಪ ಹಾಗೂ ಸಿಬಂದಿ ಸತೀಶ್‌, ಸುಬ್ರಮಣಿ, ಮಲ್ಲಿಕಾರ್ಜುನ ಮತ್ತು ಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next