Advertisement

ಮಧ್ಯಾರಾಧನೆ ; ರಾಯರಿಗೆ ಮಹಾಪಂಚಾಮೃತ ಅಭಿಷೇಕ

01:01 PM Aug 17, 2019 | keerthan |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ರಾಯರ ಮೂಲ ವೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ಜರುಗಿತು.

Advertisement

ಬೆಳಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶೇಷವಸ್ತ್ರಗಳನ್ನು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರು. ಬಳಿಕ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸುವ ಮೂಲಕ ರಾಯರಿಗೆ ಸಮರ್ಪಿಸಲಾಯಿತು. ರಾಯರ ಮೂಲ ವೃಂದಾವನಕ್ಕೆ ಶ್ರೀಗಳು ಮಹಾಪಂಚಾಮೃತ ಅಭೀಷೇಕ ನೆರವೇರಿಸಿದರು. ಹಾಲು , ಜೇನು, ತುಪ್ಪ, ಮೊಸರು ಎಳನೀರು ವಿವಿಧ ಬಗೆಯ ಹಣ್ಣುಗಳಿಂದ ರಾಯರಿಗೆ ಅಭಿಷೇಕ ನೆರವೇರಿಸಲಾಯಿತು. ಮಠದ ಪ್ರಾಂಗಣದಲ್ಲಿ ಬೃಹತ್ ಸ್ಕ್ರೀನ್ ಗಳನ್ನು ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next