Advertisement

Mantralaya ರಾಯರ ಮಧ್ಯಾರಾಧನೆ ವೈಭವ; ತಿರುಪತಿಯ ಶೇಷವಸ್ತ್ರ ಸಮರ್ಪಣೆ

10:27 AM Sep 01, 2023 | Team Udayavani |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ‌. ದೇಶ ವಿದೇಶಗಳಿಂದ ಆಗಮಿಸಿದ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

Advertisement

ಬೆಳಗ್ಗೆ ತಿರುಪತಿಯಿಂದ ಆಗಮಿಸಿದ ತಿಮ್ಮಪ್ಪನ ಶೇಷವಸ್ತ್ರಗಳನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರು. ಸಕಲ ವಾದ್ಯ ಮೇಳದೊಂದಿಗೆ ಸ್ವಾಗತಿಸಲಾಯಿತು. ಬಳಿಕ ರಾಯರಿಗೆ ಸಮರ್ಪಿಸಿದರು.

ಬಳಿಕ ಅನುಗ್ರಹ ಸಂದೇಶ ನೀಡಿದ ಗುರುಗಳು, ಇದು ಭಕ್ತರ ಮಠವಾಗಿದೆ. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ತಿಳಿಸಿ. ಮಠ ಎಲ್ಲ ಸೌಲಭ್ಯ ನೀಡಲು ಸಿದ್ಧವಿದೆ. ಇಂದು ತಿರುಪತಿ ತಿಮ್ಮಪ್ಪನಿಂದ ಪ್ರಸಾದ ರೂಪದಲ್ಲಿ ಶೇಷವಸ್ತ್ರಗಳು ಬಂದಿದ್ದು ರಾಯರಿಗೆ ಸಲ್ಲಿಸಲಾಗಿದೆ. ತಿಮ್ಮಪ್ಪನು ರಾಯರ ಮೂಲಕ ಆಶೀರ್ವದಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next