Advertisement

Madhya Pradesh ತಾಯಿಯ ಬೆತ್ತಲೆಗೊಳಿಸಿ, ಮಗನ ಹತ್ಯೆ

12:19 AM Aug 29, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದಲ್ಲಿ ದುಷ್ಕ ರ್ಮಿಗಳ ಗುಂಪೊಂದು ದಲಿತ ಕುಟುಂಬದ ಮೇಲೆ ಅಮಾನುಷವಾಗಿ ದಾಳಿ ನಡೆಸಿ, ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ 18 ವರ್ಷದ ಪುತ್ರನನ್ನು ಥಳಿಸಿ ಕೊಂದಿರುವ ಘಟನೆ ವರದಿಯಾಗಿದೆ.

Advertisement

ಸಾಗರ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. 2019ರಲ್ಲಿ ದಲಿತ ಸಮುದಾಯದ ಯುವತಿಯೊಬ್ಬರು ನಾಲ್ವರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಈಗ ಆ ಕೇಸನ್ನು ವಾಪಸ್‌ ಪಡೆಯುವಂತೆ ಪೀಡಿಸಿ, ದುಷ್ಕರ್ಮಿಗಳ ಗುಂಪು ಯುವತಿ ಮನೆಗೆ ಲಗ್ಗೆ ಇಟ್ಟಿದೆ. ಆಕೆಯನ್ನು ಥಳಿಸಿದ್ದು ಮಾತ್ರವಲ್ಲದೇ, ಯುವತಿಯ 18 ವರ್ಷದ ತಮ್ಮನನ್ನು ಹೊಡೆದು ಕೊಂದು ಹಾಕಿದ್ದಾರೆ. ಜತೆಗೆ ಯುವತಿಯ ತಾಯಿಯನ್ನು ವಿವಸ್ತ್ರಗೊಳಿಸಿ ಕ್ರೌರ್ಯ ಮೆರೆದಿದ್ದಾರೆ.

“ಘಟನೆ ನಡೆದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ನನಗೆ ಟವೆಲ್‌ ನೀಡಿದರು, ನನಗಾಗಿ ಬೇರೆ ಸೀರೆ ಹುಡುಕಿ ತರು ವವರೆಗೂ ನಾನು ಟವಲ್‌ ಧರಿಸಿಯೇ ಇದ್ದೆ. ನನ್ನ ಮಗನನ್ನು ತೀವ್ರವಾಗಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ’ ಎಂದು ಯುವತಿಯ ತಾಯಿ ಹೇಳಿಕೊಂಡಿದ್ದಾರೆ. ಇನ್ನು ದುಷ್ಕರ್ಮಿಗಳು ಸಂತ್ರಸ್ತರ ಮನೆಯನ್ನು ಧ್ವಂಸಗೊಳಿಸಿದ್ದಲ್ಲದೇ, ಅಕ್ಕ-ಪಕ್ಕದಲ್ಲಿದ್ದ ನೆಂಟರಿಷ್ಟರ ಮನೆಗೂ ನುಗ್ಗಿ, ಯಾರೂ ಸಹಾಯ ಮಾಡಬಾರದೆಂದು ಬೆದರಿಕೆ ಹಾಕಿ ಹೋಗಿದ್ದಾರೆ ಎಂದೂ ಯುವತಿಯ ಕುಟುಂಬಸ್ಥರು ಆರೋಪಿಸಿದೆ.

ಈ ಸಂಬಂಧಿಸಿದಂತೆ ಪೊಲೀಸರು 12 ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, 8 ಮಂದಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇತ್ತ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ದಲಿತರ ಮೇ ಲಿನ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯಸರಕಾರ ವಿಫ‌ಲವಾಗಿದೆ ಎಂ ದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದರೇ, ಸಾವಲ್ಲೂ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next