Advertisement

ನವಿಲನ್ನು ಕೊಂದವನ ಕೊಂದರು

10:58 AM Jul 22, 2019 | sudhir |

ಭೋಪಾಲ್:ನವಿಲನ್ನು ಕೊಂದಿದ್ದಾನೆ ಎಂಬ ಕಾರಣಕ್ಕಾಗಿ ಹೀರಾಲಾಲ್ಬನ್‌ಚಂದಾ ಎಂಬವನನ್ನು ಮಧ್ಯಪ್ರದೇಶದ ನಿಮುಚ್ ಜಿಲ್ಲೆಯಲ್ಲಿ ಜನರೇ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ಜನರ ವಿರುದ್ಧ ದೂರು ದಾಖಲಿಸಲಾಗಿದೆ.

Advertisement

ಶುಕ್ರವಾರ ಈ ಪ್ರಕರಣ ನಡೆದಿದ್ದು, ನಾಲ್ವರು ನವಿಲನ್ನು ಕೊಂದು ಹೊತ್ತುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಜನರು ಅವರನ್ನು ಅಟ್ಟಿಸಿಕೊಂಡು ಹೋಗಿದ್ದರು. ಈ ಪೈಕಿ ಹೀರಾಲಾಲ್ ಸಿಕ್ಕಿಬಿದ್ದಿದ್ದ. ಆತನ ಬಳಿ ನಾಲ್ಕು ಸತ್ತ ನವಿಲುಗಳು ಸಿಕ್ಕಿದ್ದವು. ಆತನನ್ನು ಥಳಿಸಿ ಕೃಷಿ ಜಮೀನಿನಲ್ಲೇ ಜನರು ಬಿಟ್ಟು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next