Advertisement

ಹರಕೆ ಸಲ್ಲಿಸಿದ ಮಧ್ಯ ಪ್ರದೇಶ ಸಿಎಂ

04:40 AM Jun 27, 2020 | Lakshmi GovindaRaj |

ಮೇಲುಕೋಟೆ: ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚವಾಣ್‌ ದಂಪತಿ ಸಮೇತರಾಗಿ ಶುಕ್ರವಾರ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದು ಹರಕೆ ಪೂರೈಸಿದರು. ಮೈಸೂರಿನಿಂದ ಆಗಮಿಸಿದ  ಸಿಎಂ ದಂಪತಿಗಳನ್ನು ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಡೀಸಿ ಡಾ.ವೆಂಕಟೇಶ್‌ ಮೈಸೂರು ಪೇಟ ತೊಡಿಸಿ ಬರ ಮಾಡಿಕೊಂಡರು.

Advertisement

ನಂತರ ಆಂಧ್ರ ಪ್ರದೇಶದ ಚಿನ್ನಜೀಯರ್‌ ಸ್ವಾಮೀಜಿಯ ಶಾಖಾ ಮಠದಲ್ಲಿ ಪೂಜೆಮಾಡಿದರು. ದೇವಾಲಯಕ್ಕೆ ತೆರಳಿ ಕ್ಷೇತ್ರದ  ಶ್ರೀಚೆಲುವನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಯದುಗಿರಿನಾಯಕಿ ಅಮ್ಮನವರು ಆಚಾರ್ಯ ರಾಮಾನುಜಾಚಾರ್ಯರು, ಮಣವಾಳ ಮಾಮುನಿ ಜೀಯರ್‌ ದರ್ಶನ ಮಾಡಿ, ಬೆಟ್ಟಹತ್ತಿ ಶ್ರೀ ಯೋಗಾನರಸಿಂಹನ ದರ್ಶನ  ಮಾಡಿದರು.

ಬೆಳ್ಳಿ ರಥ ನಿರ್ಮಿಸಲು ಸಂಕಲ್ಪ: ದೇವಾಲಯದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್‌ ಗುರೂಜಿ ಮತ್ತು ವಿದ್ವಾನ್‌ ರಾಮಪ್ರಿಯ ಪುಟ್ಟರಥ ನಿರ್ಮಿಸಿಕೊಡಿ ಎಂದು ಮಧ್ಯ  ಪ್ರದೇಶ ಸಿಎಂಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಿವರಾಜ್‌ ಸಿಂಗ್‌ ಅವರು ಸಂಕಲ್ಪ ಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next