Advertisement

Madhya Pradesh: ಬಿಜೆಪಿ ಯುವ ನಾಯಕನ ಗುಂಡಿಕ್ಕಿ ಹತ್ಯೆ

12:41 AM Jun 24, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶ ಸಚಿವ ಕೈಲಾಶ್‌ ವಿಜಯ್‌ವರ್ಗೀಯ ಅವರ ಆಪ್ತ ಹಾಗೂ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಮೋನು ಕಲ್ಯಾಣೆ(35) ಎಂಬವರನ್ನು ಇಂದೋ ರ್‌ನಲ್ಲಿ ರವಿವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿ ದ್ದಾರೆ. ಮನ್‌ಬಾಗ್‌ ಪ್ರದೇಶದಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಕಲ್ಯಾಣೆ ಮತ್ತು ಅವರ ಸಂಗಡಿಗರು ಅಂಟಿಸುತ್ತಿದ್ದರು.

Advertisement

ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಲ್ಯಾಣೆ ಅವರ ಬಳಿಯೇ ಕಾರ್ಯಕ್ರಮದ ವಿವರ ಗಳನ್ನು ಕೇಳುವ ನೆಪದಲ್ಲಿ ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿ ದ್ದಾರೆ. ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಕಲ್ಯಾಣೆ ಅವರ ಮೇಲಿದ್ದ ಹಳೇ ವೈಷಮ್ಯದಿಂದ ಕೃತ್ಯ ಎಸಗಿರುವ ಬಗ್ಗೆ ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next