Advertisement

ಮಧ್ವರಾಜ್‌ ನೀನು ಬಿಜೆಪಿ ಸೇರುತ್ತೀಯಾ ? ಸಿಎಂ ಪ್ರಶ್ನೆ 

02:36 PM Nov 19, 2017 | |

ಮಂಗಳೂರು: ”ಮಧ್ವರಾಜ್‌ ನೀನು ಬಿಜೆಪಿ ಸೇರುತ್ತೀಯಾ ?.”ಇದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಭಾನುವಾರ  ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಮಾಧ್ಯಮಗಳ ಮುಂದೆ ಕರೆದು ಕೇಳಿದ ಪ್ರಶ್ನೆ.

Advertisement

ಸಿಎಂ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಮೋದ್‌ ‘ನಾನು ಬಿಜೆಪಿ ಸೇರುತ್ತಿಲ್ಲ, ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಇದಲ್ಲಾ  ಸುಳ್ಳು ಸುದ್ದಿ’ ಎಂದು ಉತ್ತರಿಸಿದರು. 

ಬಳಿಕ ಮಾತನಾಡಿದ ಸಿಎಂ’ಹಲವು ಮುಖಂಡರು ನನ್ನ ನ್ನು ಸಂಪರ್ಕಿಸಿ  ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಕುರಿತು ಮಾತುಕತೆ ನಡೆಸಿದ್ದಾರೆ.ಆರ್‌ಎಸ್‌ಎಸ್‌ನವರೂ ನನ್ನ ಸಂಪರ್ಕದಲ್ಲಿದ್ದಾರೆ,ಆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದು ಬಾಂಬ್‌ ಸಿಡಿಸಿದರು. 

ಪ್ರಮೋದ್‌ ಬಿಜೆಪಿ ಸೇರುತ್ತಿಲ್ಲ ಇದೆಲ್ಲಾ ಬಿಜೆಪಿಯವರು ಸೃಷ್ಟಿಸುತ್ತಿರುವ ಗೊಂದಲ, ವದಂತಿ  ಎಂದರು. 

ಉಡುಪಿಯಲ್ಲಿ  ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್‌ಎಸ್‌ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕರ್ನಾಟಕ ಸರಕಾರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆಗೆಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಆಗಮಿಸಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next