Advertisement

ಮಧುಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಅಪಾರ ಬೆಳೆ ನಾಶ

12:57 PM Feb 13, 2023 | Team Udayavani |

ಮಧುಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರೈತರ ಅಪಾರ ತೆಂಗು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು, ಪರಿಹಾರಕ್ಕಾಗಿ ರೈತರು ಮೊರೆಯಿಡುತ್ತಿದ್ದಾರೆ.

Advertisement

ತಾಲೂಕಿನ ದೊಡ್ಡೇರಿ ಹೋಬಳಿಯ ಬಿಟ್ಟನಕುರಿಕೆ ಗ್ರಾಮದ ರೈತ ಹನುಂಮತರಾಯಪ್ಪ ಎಂಬವರ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಜಮೀನಿನೆಲ್ಲೆಡೆ ಹರಡಿಕೊಂಡಿದೆ.

ಇದರ ಪರಿಣಾಮ ಮದ್ಲೇರಹಳ್ಳಿ ಜಮೀನಿನಲ್ಲಿ ಬೆಳೆಯಲಾಗಿದ್ದ 350 ತೆಂಗು ಹಾಗೂ 150 ಅಡಿಕೆ ಮರಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಮಯ ಈ ಅವಘಡ ನಡೆದಿದ್ದು, ಬೆಂಕಿ ಆರಿಸುವಷ್ಟರಲ್ಲಿ ಶೇ.75 ರಷ್ಟು ಮರಗಳು ಸುಟ್ಟು ಹೋಗಿದ್ದವು.

ತೋಟ ಉಳಿಸಿಕೊಳ್ಳಲು ನೀರು ಬೇಕು ಎಂದು ಬಡವನಹಳ್ಳಿ ಬೆಸ್ಕಾಂ ಕಚೇರಿಗೆ ತೆರಳಿದ ರೈತ ಮೋಟಾರ್ ಪಂಪಿಗೆ ವಿದ್ಯುತ್ ಸರಬರಾಜು ನೀಡುವಂತೆ ಮನವಿ ಮಾಡಿದ್ದು, ಬೇಗ ಕ್ರಮ ವಹಿಸುವುದಾಗಿ ಎಸ್ ಓ ಮಾರುತಿ ಖೇಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next