Advertisement

ಮಧು ಬಂಗಾರಪ್ಪ ವಿವಿಧೆಡೆ ಪ್ರಚಾರ

02:29 AM Mar 25, 2019 | Team Udayavani |

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ರವಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದರು. ಕಂಡೂÉರಿನಲ್ಲಿ ಕಾರ್ಯಕರ್ತರ ಜತೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಿದರು.

Advertisement

ಮಾಜಿ ಶಾಸಕ ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಶೆಟ್ಟಿ ಗುಡಿಬೆಟ್ಟು, ಕಾಂಗ್ರೆಸ್‌ ಮುಖಂಡರಾದ ದೇವಾನಂದ್‌ ಶೆಟ್ಟಿ, ರಾಜು ದೇವಾಡಿಗ, ವಿಜಯ ಪುತ್ರನ್‌, ಮುನಾಫ್‌, ಮುಜಾಹಿದ್ದೀನ್‌, ಶರತ್‌ ಶೆಟ್ಟಿ, ಮಂಜುಳಾ ದೇವಾಡಿಗ, ಜಿ.ಪಂ. ಸದಸ್ಯೆ ಜ್ಯೋತಿ ಎಂ. ಕಾವ್ರಾಡಿ, ತಾ.ಪಂ. ಸದಸ್ಯೆ ಅಂಬಿಕಾ, ಕಾವ್ರಾಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಹಲವೆಡೆ ಪ್ರಚಾರ
ಮಧು ಬಂಗಾರಪ್ಪ ಅವರು ರವಿವಾರ ಬೈಂದೂರು ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದರು. ತಲ್ಲೂರು, ಹಟ್ಟಿಯಂಗಡಿ, ಗುಲ್ವಾಡಿ, ಅಂಪಾರು, ಶಂಕರನಾರಾಯಣ, ಸಿದ್ದಾಪುರ, ಯಡಮೊಗೆ, ಆಜ್ರಿ ಮೊದಲಾದೆಡೆ ಕಾರ್ಯಕರ್ತರನ್ನು ಭೇಟಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next