Advertisement

ಮುಧೋಳ: 30 ಸ್ಥಳದಲ್ಲಿ ಕಾರ್ಯಕ್ರಮ ಯಶಸ್ವಿ

02:58 PM Jul 03, 2020 | Suhan S |

ಮುಧೋಳ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಪಕ್ಷದ ಯುವ ಮುಖಂಡ ಸತೀಶ ಬಂಡಿವಡ್ಡರ ನೇತೃತ್ವದಲ್ಲಿ ಮುಧೋಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 30 ವಿವಿಧ ಕಡೆ ಯಶಸ್ವಿಯಾಗಿ ಜರುಗಿತು.

Advertisement

ಮುಧೋಳ ನಗರದಲ್ಲಿ 5 ಕಡೆ, ಎಲ್ಲ ಗ್ರಾಪಂಗಳಲ್ಲಿ ಸೇರಿ 30 ಕಡೆ ಕಾರ್ಯಕ್ರಮ (ಜೂಮ್‌) ಹೊಸ ತಂತ್ರಜ್ಞಾನದೊಂದಿಗೆ ಎಲ್ಲ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಿದರು. ಏಕಕಾಲಕ್ಕೆ ಸಂವಿಧಾನ ಪೀಠಿಕೆ ಹಾಗೂ ಪ್ರತಿಜ್ಞೆ ಕಾರ್ಯಕರ್ತರಿಗೆ ಬೋಧಿಸಲಾಯಿತು. ಮುಧೋಳ ನಗರ, ಗುಲಗಾಲಜಂಬಗಿ ಹಾಗೂ ಬಂಟನೂರ ಗ್ರಾಮಗಳಲ್ಲಿ ಸತೀಶ ಬಂಡಿವಡ್ಡರ ಕಾರ್ಯಕ್ರಮಗಳಲ್ಲಿಭಾಗವಹಿಸಿದ್ದರು.

ಕೆಪಿಸಿಸಿ ಕಾರ್ಯದರ್ಶಿ ಹಾಸೀಂಪೀರ ವಾಲಿಕಾರ, ವಿನೋದ ವ್ಯಾಸ್‌, ಸಂಜು ನಾಯಕ, ಸಾಮಾಜಿಕ ಜಾಲತಾಣದ ಮುಧೋಳ ತಾಲೂಕು ಸಂಚಾಲಕ ಸುಧೀರ ಅರಳಿಕಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next