Advertisement

ಸುಬ್ರಹ್ಮಣ್ಯ: ಭಕ್ತರಿಂದ ಬೀದಿ ಮಡೆಸ್ನಾನ ಸೇವೆ ಪ್ರಾರಂಭ

11:27 PM Dec 15, 2020 | mahesh |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯಲ್ಲೊಂದಾದ ಬೀದಿ ಮಡೆಸ್ನಾನ (ಬೀದಿಯಲ್ಲಿ ಉರುಳು ಸೇವೆ)ವನ್ನು ಸೋಮವಾರ ರಾತ್ರಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದರು.

Advertisement

ಕುಮಾರಧಾರಾ ಸ್ನಾನಘಟ್ಟದಿಂದ ರಾಜರಸ್ತೆ, ರಥಬೀದಿಯ ಮೂಲಕ ದೇವಸ್ಥಾನದ ತನಕ ಸುಮಾರು 2 ಕಿ.ಮೀ. ದೂರ ಕಠಿಣವಾದ ಉರುಳು ಸೇವೆ ಷಷ್ಠಿಯ ಮಹಾರಥೋತ್ಸವದ ತನಕ ನಡೆಯುತ್ತದೆ. ಜಾತ್ರೆಯ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಈ ಸೇವೆ ನೆರವೇರುತ್ತದೆ.

ಮನವಿ
ಈ ಬಾರಿ ಕಾಂಕ್ರೀಟ್‌ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಭಕ್ತರು ಸಂಜೆ 5ರಿಂದ ಬೆಳಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಬೇಕು ಎಂದು ದೇಗುಲದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.

ಪ್ರತ್ಯೇಕ ಪಥ
ಈ ಸೇವೆಗೆ ಯಾವುದೇ ರಶೀದಿ ಇಲ್ಲದಿದ್ದರೂ ಭಕ್ತರಿಗೆ ದೇವಸ್ಥಾನದ ವತಿಯಿಂದ ಸಕಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಕುಮಾರಧಾರೆಯಿಂದ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದ್ದು, ಒಂದು ಭಾಗವನ್ನು ಉರುಳು ಸೇವೆಗಾಗಿಯೇ ಮೀಸಲಿಡಲಾಗಿದೆ. ಇಲ್ಲಿ ವಾಹನ ಸಂಚಾರಕ್ಕೆ ಅವಕಾವಿಲ್ಲ. ಪ್ರತಿನಿತ್ಯ ರಸ್ತೆಯನ್ನು ಗುಡಿಸಿ ಸ್ವತ್ಛ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next