Advertisement

ಮಡಾಮಕ್ಕಿ: ಬಾವಿಗೆ ಬಿದ್ದ  ಚಿರತೆ ಪಾರು

04:00 AM Jul 19, 2017 | Team Udayavani |

ಸಿದ್ದಾಪುರ: ಮಡಾಮಕ್ಕಿ ಸಮೀಪದ ಕೇಳಾರಬೆಟ್ಟು ಶೇಖರ ಶೆಟ್ಟಿ ಅವರ ಬಾವಿಗೆ ಬಿದ್ದ ಚಿರತೆಯನ್ನು ಸ್ಥಳೀಯರ ಸಹಕಾರದಲ್ಲಿ ಅರಣ್ಯ ಇಲಾಖೆ ಅ ಧಿಕಾರಿಗಳು ಪಾರು ಮಾಡಿದರು.

Advertisement

ಮಂಗಳವಾರ ಬೆಳಗ್ಗೆ ನೀರು ತುಂಬಿದ ಬಾವಿಯಲ್ಲಿ ಬಿದ್ದಿರುವ ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖಾ  ಅಧಿಕಾರಿಗಳು, ಸಿಬಂ ದಿ ಮರದ ಏಣಿಯನ್ನು ಬಾವಿಗೆ ಇಳಿಸಿ ಅದರ ಮೂಲಕ ಚಿರತೆ ಮೇಲೇರುವಂತೆ ಮಾಡಿ ದರು. ಬಳಿಕ ಚಿರತೆ ಸಮೀಪದ ಕಾಡಿಗೆ ಹೋಯಿತು.

ಹೆಬ್ರಿ ವಲಯ ಅರಣ್ಯಾಧಿ ಕಾರಿ ಲೋಹಿತ್‌, ವನ್ಯ ಜೀವಿ ವಿಭಾಗದ ಉಪ ವಲಯಾರಣ್ಯಾ ಧಿಕಾರಿ ವಿನಯ ಕುಮಾರ್‌, ಅರಣ್ಯ ರಕ್ಷಕ ರಾವೋತ್‌ ಬಿರಾದಾರ್‌ ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next