Advertisement

ಮಾಝ್ ಮುನೀರ್‌ ನಂಟು: ತನಿಖೆಗೆ ರಾಜೇಶ್‌ ನಾೖಕ್‌ ಆಗ್ರಹ

10:01 PM Sep 22, 2022 | Team Udayavani |

ಬೆಂಗಳೂರು:  ಇತ್ತೀಚೆಗೆ ಶಿವಮೊಗ್ಗದಲ್ಲಿ ಬಂಧಿಸಲಾದ ಶಂಕಿತ ಉಗ್ರರ ಪೈಕಿ ಮಾಝ್ ಮುನೀರ್‌ ಎಂಬಾತನ ದಕ್ಷಿಣ ಕನ್ನಡ ಜಿಲ್ಲೆಯ ನಂಟಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿನ ಕ್ರಮ ಕೈಗೊಳ್ಳುವಂತೆ  ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಆಗ್ರಹಿಸಿದ್ದಾರೆ.

Advertisement

ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಶೂನ್ಯವೇಳೆಯಲ್ಲಿ  ವಿಷಯ ಪ್ರಸ್ತಾವಿಸಿದ ರಾಜೇಶ್‌ ನಾಯಕ್‌,  ಮಾಝ್ ಮುನೀರ್‌ನನ್ನು ಬುಧವಾರ ನನ್ನ ಕ್ಷೇತ್ರದ ನಾವೂರಿಗೆ ಕರೆದುಕೊಂಡು ಬಂದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಅಲ್ಲಿ ಬಾಂಬ್‌ ಸ್ಫೋಟದ ತರಬೇತಿ  ನಡೆಯುತ್ತಿತ್ತು ಎಂಬ ವರದಿಗಳಿವೆ. ಸ್ಥಳೀಯರ ನೆರವು ಇಲ್ಲದೇ ಇದೆಲ್ಲ ಸಾಧ್ಯವಿಲ್ಲ.  ಆತನಿಗೆ ಸ್ಥಳಾವಕಾಶ ಒದಗಿಸಿದ್ದು ಯಾರು? ನೆರವು ನೀಡಿದ ಸ್ಥಳೀಯರು ಎಂಬುದು ಗೊತ್ತಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಈ ಬಗ್ಗೆ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next