Advertisement

ಪುಲ್ವಾಮಾ, ಬಾಲ್ ಕೋಟ್ ದಾಳಿಯಾವಾಗಲು ವರ್ಕೌಟ್ ಆಗಲ್ಲ: ಎಂಬಿ ಪಾಟೀಲ್

09:39 AM Oct 25, 2019 | keerthan |

ಬೆಂಗಳೂರು: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಯ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಈ  ಹಿನ್ನಲೆಯಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದು, ಪುಲ್ವಾಮಾ, ಬಾಲ್ ಕೋಟ್ ದಾಳಿಯಾವಾಗಲು ವರ್ಕೌಟ್ ಆಗುವುದಿಲ್ಲ ಎಂದಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ ಬಿ ಪಾಟೀಲ್, ಮಹಾರಾಷ್ಟ್ರದಲ್ಲಿ ಬಿಜೆಪಿಯವರು ನಡೆಸಿದ್ದರು. ಕಾಂಗ್ರೆಸ್,ಎನ್ ಸಿಪಿಯನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದರು ಎಂದರು.

ಜನರನ್ನ ಒಮ್ಮೆ ಮರಳು ಮಾಡಬಹುದು. ಆದರೆ ಪುಲ್ವಾಮಾ,ಬಾಲ್ ಕೋಟ್ ದಾಳಿ ಯಾವಾಗಲೂ ವರ್ಕೌಟ್ ಆಗಲ್ಲ. ಇದನ್ನ ಮುಂದಿಟ್ಟುಕೊಂಡು ಜನರನ್ನ ದಾರಿತಪ್ಪಿಸೋಕೆ ಆಗಲ್ಲ. ಸದ್ಯಕ್ಕೆ ಅವರಿಗೆ ಲಾಭವಾಗಬಹುದು. ಇದೆಲ್ಲವೂ ಕ್ಷಣಿಕ,ಮುಂದೆ ಉತ್ತಮ ಸನ್ನಿವೇಶ ಬರಲಿದೆ.  ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಸಿಗಲಿದೆ ಎಂದು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next