Advertisement

ಅದೃಷ್ಟದ ತಿಂಗಳು ಮತ್ತು ಮಂಜು ಸಿನಿಮಾ

09:40 AM Nov 09, 2019 | mahesh |

ಈ ಹಿಂದೆ ರವಿಚಂದ್ರನ್‌ ಅಭಿನಯದ “ದೃಶ್ಯ’ ಎಲ್ಲರನ್ನೂ ಮೋಡಿ ಮಾಡಿತ್ತು. ಅಷ್ಟೇ ಅಲ್ಲ, ಎಲ್ಲರಿಂದಲೂ ಪ್ರಶಂಸೆ ಪಡೆದು, ಯಶಸ್ಸು ಕಂಡಿತ್ತು. ಈಗ “ಆ ದೃಶ್ಯ’ ಚಿತ್ರದ ಸರದಿ. ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲೂ ರವಿಚಂದ್ರನ್‌ ಮುಖ್ಯ ಆಕರ್ಷಣೆ. ಶಿವಗಣೇಶ್‌ ನಿರ್ದೇಶನದ ಈ ಚಿತ್ರವನ್ನು ಕೆ.ಮಂಜು ನಿರ್ಮಿಸಿದ್ದಾರೆ. ಪುರುಷೋತ್ತಮ್‌ ಸಾಥ್‌ ಕೊಟ್ಟಿದ್ದಾರೆ. ಇದೊಂದು ಸಸ್ಪೆನ್ಸ್‌ ಜಾನರ್‌ ಚಿತ್ರವಾಗಿದ್ದು, ಸಹಜವಾಗಿಯೇ ಕೆ.ಮಂಜು ಅವರಿಗೆ ಹೊಸಬಗೆಯ ಚಿತ್ರ ನಿರ್ಮಿಸಿದ್ದು ಖುಷಿಕೊಟ್ಟಿದೆ.

Advertisement

ತಮ್ಮ ನಿರ್ಮಾಣದ “ಆ ದೃಶ್ಯ’ ಕುರಿತು ಹೇಳುವ ಕೆ.ಮಂಜು, “ಇದು ಎಲ್ಲರಿಗೂ ಹತ್ತಿರವಾಗುವಂತಹ ಚಿತ್ರ. ಈಗಾಗಲೇ ಚಿತ್ರದ ತುಣುಕು ನೋಡಿದವರಿಗೆ ಸಿನಿಮಾ ಕುತೂಹಲ ಮೂಡಿಸಿದೆ. ಪೋಸ್ಟರ್‌ ನೋಡಿದ ಅದೆಷ್ಟೋ ಮಂದಿ, ರವಿಚಂದ್ರನ್‌ ಅವರ ಹೊಸ ಗೆಟಪ್‌ ಕಂಡು ದ್ವಿ ಪಾತ್ರ ಇದೆಯಾ ಅಂತೆಲ್ಲಾ ಕೇಳುತ್ತಿದ್ದಾರೆ. ಇಲ್ಲಿ ರವಿಚಂದ್ರನ್‌ ಮುಖ್ಯ ಆಕರ್ಷಣೆಯಾಗಿದ್ದು, ಅವರ ಸುತ್ತವೇ ಕಥೆ ಸುತ್ತಲಿದೆ. ಇದುವರೆಗೆ ಮಾಡಿರುವ ಸಿನಿಮಾಗಳಿಗಿಂತಲೂ ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್‌ ಕಾಣಿಸಿಕೊಂಡಿದ್ದಾರೆ’ ಎಂಬುದು ಕೆ.ಮಂಜು ಮಾತು.

ನಿರ್ದೇಶಕ ಶಿವಗಣೇಶ್‌ ಅವರಿಗೆ ರವಿಚಂದ್ರನ್‌ ಅವರನ್ನು ನಿರ್ದೇಶಿ­ಸಿದ್ದು ಖುಷಿಯ ವಿಷಯ­ವಾದರೆ, ಅವರ ಜೊತೆಗೆ ಕೆಲಸ ಮಾಡಿದ ಅನುಭವ ಅನನ್ಯ. ಅವರೇ ಹೇಳುವಂತೆ, “ನನಗೆ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ಅದೃಷ್ಟ. ಅದರಲ್ಲೂ ರವಿ ಸರ್‌ ಜೊತೆ ಕೆಲಸ ಮರೆಯದ ಅನುಭವ ಕೊಟ್ಟಿದೆ. ಅವರಿಂದ ನಾನು ಸಾಕಷ್ಟು ತಿಳಿದುಕೊಂಡಿದ್ದೇನೆ. ಇನ್ನು, ನಿರ್ಮಾಪಕ ಕೆ.ಮಂಜು ಅವರು, ಕೇಳಿದ್ದೆಲ್ಲವನ್ನೂ ನೀಡಿದ್ದಾರೆ. ಹೀಗಾಗಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ತೆರೆ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಕ್ಕೂ ವಿಶೇಷತೆ ಇದೆ. ಖಂಡಿತವಾಗಿಯೂ “ಆ ದೃಶ್ಯ’ ಎಲ್ಲರ ಮನಸ್ಸನ್ನು ಗೆಲ್ಲುತ್ತೆ ಎಂಬ ನಂಬಿಕೆ ಇದೆ’ ಎಂದರು ಅವರು.

Advertisement

Udayavani is now on Telegram. Click here to join our channel and stay updated with the latest news.

Next