Advertisement

ಸೆಲ್ಫಿ ಮಾಡಿ ಯುವಕ ಆತ್ಮಹತ್ಯೆ ;ಪ್ರಿಯತಮೆಯೇ ವಿಷವನ್ನು ಕೈಗೆ ತಂದಿಟ್ಟಳೆ?

09:45 AM May 20, 2019 | Team Udayavani |

ನಂಜನಗೂಡು : ತಾಲೂಕಿನ ಕಸುವಿನಹಳ್ಳಿಯಲ್ಲಿ ಪ್ರೇಮವೈಫ‌ಲ್ಯವಾದ ಕಾರಣ 22 ರ ಹರೆಯದಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆನಡೆದಿದೆ.

Advertisement

ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡ ಯುವಕ, ಪ್ರಿಯತಮೆಯೆ ನನಗೆ ವಿಷ ತಂದು ಕೊಟ್ಟಿದ್ದಾಳೆ, ನನ್ನನ್ನು ಪ್ರೀತಿಸಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ. ಆಕೆಗೆ ಮದುವೆಯಾಗಬಾರದು. ಆಕೆಯನ್ನು ಜೈಲಿಗೆ ಹಾಕಬೇಕು.ನನ್ನ ಸಾವಿಗೆ ಪ್ರೇಯಸಿ ,ಆಕೆಯ ತಾಯಿ, ಅಜ್ಜಿಯೇ ಕಾರಣ ಎಂದು ಸೆಲ್ಫಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಬೆಳವಾಡಿಯ ಬೇಕರಿಯೊಂದರಲ್ಲಿ ಸಿದ್ದರಾಜು ಕೆಲಸ ಮಾಡುತ್ತಿದ್ದನು. ಅಲ್ಲೇ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ.

ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next