Advertisement
ಒಂದು ಊರಿನಲ್ಲಿ ಲಕ್ಷ್ಮಪ್ಪನೆಂಬ ಅಗಸನಿದ್ದನು. ಊರ ಜನರ ಬಟ್ಟೆಗಳನ್ನು ತೊಳೆದು ಅವುಗಳಿಗೆ ಗರಿ ಗರಿಯಾಗಿ ಇಸ್ತ್ರಿ ಮಾಡಿ ಕೊಡುವುದು ಅವನ ನಿತ್ಯದ ಕಾಯಕವಾಗಿತ್ತು. ಪ್ರತಿಯಾಗಿ ಜನರೂ ಅವನಿಗೆ ಹಣವನ್ನು ಕೊಡುತ್ತಿದ್ದರು. ತನ್ನ ಕಾಯಕದಲ್ಲಿ ಅವನು ಸುಖವಾಗಿದ್ದನು. ತನ್ನ ಕೆಲಸಕ್ಕಾಗಿ ಅವನು ಒಂದು ಕತ್ತೆಯನ್ನು ಸಾಕಿಕೊಂಡಿದ್ದನು. ದಿನಾಲೂ ಊರ ಜನರ ಬಟ್ಟೆಗಳನ್ನು ಮೂಟೆ ಕಟ್ಟಿ ಕತ್ತೆಯ ಮೇಲೆ ಹೊರಿಸುತ್ತಿದ್ದನು. ನಂತರ ಇಬ್ಬರೂ ನದಿಯ ತೀರಕ್ಕೆ ಹೋಗುತ್ತಿದ್ದರು. ಅಲ್ಲಿ ಅಗಸನು ಬಟ್ಟೆ ಒಗೆದು ಮರಳಿನ ಮೇಲೆ ಒಣಗಲು ಹಾಕುತಿದ್ದನು. ಅಲ್ಲಿಯವರೆಗೆ ಕತ್ತೆ ಪಕ್ಕದಲ್ಲೇ ಹುಲ್ಲು ಮೇಯುತ್ತಿತ್ತು.
Related Articles
Advertisement
ಲಕ್ಷ್ಮಪ್ಪ ಕತ್ತಲೆಯಲ್ಲಿ ಒಬ್ಬನೇ ಒಂದು ಸಲಿಕೆ, ಗುದ್ದಲಿ ತೆಗೆದುಕೊಂಡು ಹೋದ. ಮಣ್ಣನ್ನು ಅಗೆದು ಬಾವಿಯೊಳಕ್ಕೆ ಹಾಕತೊಡಗಿದ. ಆದರೆ ಕತ್ತೆ ಯೋಚಿಸಿದ್ದೇ ಬೇರೆ. ಯಜಮಾನ ತನ್ನನ್ನು ಮೇಲಕ್ಕೆತ್ತಲು ಮಣ್ಣನ್ನು ಹಾಕುತ್ತಿದ್ದಾನೆ ಎಂದುಕೊಂಡಿತು ಕತ್ತೆ. ಅದಕ್ಕೇ ಅಗಸ ಮಣ್ಣು ಹಾಕಿದಂತೆಲ್ಲಾ ಅದರ ಮೇಲೆ ಹತ್ತಿ ನಿಲ್ಲುತ್ತಿತ್ತು. ಕತ್ತಲಾದ್ದರಿಂದ ಅಗಸನಿಗೆ ಇದು ತಿಳಿಯಲಿಲ್ಲ. ಅವನು ಮಣ್ಣು ತುಂಬುತ್ತಲೇ ಹೋದ. ಬೆಳಗ್ಗಿನ ಜಾವ ಆಗುವಷ್ಟರಲ್ಲಿ ಅಗಸ ಬಾವಿಯ ಕಂಠಪೂರ್ತಿ ಮಣ್ಣು ತುಂಬಿದ್ದ. ಕತ್ತೆ ಬಾವಿಯ ಮೇಲಕ್ಕೆ ಜಿಗಿದು ಬಂದಿತು. ಅಗಸನ ಹತ್ತಿರ ಬಂದು ಗೌರವಪೂರ್ವಕವಾಗಿ ತಲೆ ಬಾಗಿಸಿತು. ರಾತ್ರಿ ಸಾಯಿಸಲೆಂದು ಹೊರಟಿದ್ದ ಪ್ರಾಣಿ ಅವನ ಎದುರಿಗೆ ಬಂದು ನಿಂತಿದ್ದು ಕಂಡು ಅಗಸನಿಗೆ ನಾಚಿಕೆಯಾಯಿತು. ಕತ್ತೆಯನ್ನು ಕರೆದುಕೊಂಡು ಮನೆಗೆ ಹೊರಟ. ಹಿಂದಿರುಗುವಾಗ ಕತ್ತಲಲ್ಲಿ ಲಕ್ಷ್ಮಪ್ಪ ತೆರೆದ ಬಾವಿಯೊಂದಕ್ಕೆ ಬಿದ್ದುಬಿಟ್ಟ. ಕೈಕಾಲುಗಳಿಗೆ ಪೆಟ್ಟಾಗಿ ಕೂಗಿದ. ಯಜಮಾನನಿಗೆ ಒದಗಿದ ದುಸ್ಥಿತಿಗೆ ಮರುಗಿದ ಕತ್ತೆ ತನ್ನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಾವಿಯೊಳಕ್ಕೆ ಇಳಿಬಿಟ್ಟಿತು. ಲಕ್ಷ್ಮಪ್ಪ ಹಗ್ಗವನ್ನು ಬಿಗಿಯಾಗಿ ಹಿಡಿದುಕೊಂಡ. ಕತ್ತೆ ತನ್ನ ಬಲವನ್ನೆಲ್ಲಾ ಒಗ್ಗೂಡಿಸಿ ಮುಂದಕ್ಕೆ ಎಳೆಯಿತು. ಲಕ್ಷ್ಮಪ್ಪನ ಜೀವ ಉಳಿಯಿತು. ಅವನಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಅಶಕ್ತವಾಗಿದ್ದ ಕತ್ತೆಯೇ ಅವನ ಜೀವ ಉಳಿಸಿತ್ತು. ಅವನು ಪ್ರೀತಿಯಿಂದ ಕತ್ತೆಯ ತಲೆ ನೇವರಿಸಿದ. ಇಬ್ಬರೂ ಮನೆ ಕಡೆ ಹೊರಟರು.
ಭೋಜರಾಜ ಸೊಪ್ಪಿಮಠ