Advertisement

Love; ಒಟ್ಟಿಗಿರಲು ಭಿಕ್ಷುಕನನ್ನು ಸುಟ್ಟು ಪ್ರೇಮಿಗಳ ನಾಟಕ!!: 27 ವರ್ಷದ ಯುವತಿ ಬಂಧನ

01:57 AM Oct 14, 2024 | Team Udayavani |

ರಾಜ್‌ಕೋಟ್‌: ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ಆತ್ಮಹತ್ಯೆ ಮಾಡಿಕೊಂಡಂತೆ ನಾಟಕ ಮಾಡಲು ಅಮಾಯಕ ಭಿಕ್ಷುಕನನ್ನು ಕೊಂದಿದ್ದ 27 ವರ್ಷದ ಯುವತಿಯನ್ನು ಗುಜ ರಾತಿನ ಕಛ್ ನಲ್ಲಿ ಬಂಧಿಸಲಾಗಿದೆ.

Advertisement

ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ 2ನೇ ಮದುವೆಯಾಗಿದ್ದ ರಮಿ ಕೇಸರಿಯಾ ತನ್ನ ಪ್ರಿಯಕರ ಅನಿಲ್‌ ಗಂಗಾಲ್‌ನೊಂದಿಗೆ ಬದುಕಲು ಯೋಜಿಸಿದ್ದಳು. ಆದರೆ ಅದಕ್ಕೆ ಪತಿಯ ಮನೆಯವರು ಅವಕಾಶ ನೀಡುವುದಿಲ್ಲ ಎಂದು, ಅವರನ್ನು ತಾನು ಆತ್ಮಹತ್ಯೆ ಮಾಡಿಕೊಂಡಂತೆ ನಂಬಿಸಲು ಯೋಜಿಸಿದಳು. ಅದಕ್ಕಾಗಿ ಭಿಕ್ಷುಕನನ್ನು ಜು.5ರಂದು ಅಪಹರಿಸಿದ ರಮಿ ಮತ್ತು ಅನಿಲ್‌ ಆತನನ್ನು ಕೊಂದಿ ದ್ದಾರೆ. ರಮಿಯ ಪತಿ ಮನೆ ಬಳಿಯಲ್ಲೇ ಭಿಕ್ಷುಕನ ಮೃತದೇಹಕ್ಕೆ ಬೆಂಕಿಯಿಟ್ಟು, ತನ್ನ ಫೋನ್‌, ಚಪ್ಪಲಿಯನ್ನು ಶವದ ಬಳಿ ಎಸೆದು ತಾನೇ ಆತ್ಮಹತ್ಯೆ ಮಾಡಿ ಕೊಂಡಂತೆ ಮನೆಯವರನ್ನು ನಂಬಿಸು ವಲ್ಲಿ ಯಶಸ್ವಿಯಾಗಿದ್ದಾಳೆ. ಬಳಿಕ ಅನಿಲ್‌ ಜತೆ ಪರಾರಿಯಾಗಿದ್ದು, ಕೆಲವು ದಿನಗಳ ಬಳಿಕ ಪಶ್ಚಾತ್ತಾಪದಿಂದ ತಂದೆ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ತಂದೆ ಪೊಲೀಸರಿಗೆ ವಿಷಯ ಮುಟ್ಟಿ ಸಿದ್ದು, ರಮಿ ಮತ್ತು ಅನಿಲ್‌ನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next