Advertisement

ಲಿಂಗಾಯತ ರ್ಯಾಲಿಗೆ ಜನಸಾಗರ

10:36 AM Sep 25, 2017 | |

ಕಲಬುರಗಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಬಸವ ಸೇನಾದ ಅಧ್ಯಕ್ಷರಾಗಿ ಸಚಿವ ವಿನಯ ಕುಲಕರ್ಣಿ ಅವರು ಬಸವ ಧರ್ಮದ ಧ್ವಜ ಸ್ವೀಕರಿಸಿದರು.

Advertisement

ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ರವಿವಾರ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಸಲಾದ ಲಿಂಗಾಯತ ಮಹಾರ್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬಸವಾಭಿಮಾನಿಗಳು, ಮಠಾಧೀಶರು ಮತ್ತು ವಿವಿಧ ರಾಜಕೀಯ ಗಣ್ಯರ ಸಮ್ಮುಖದಲ್ಲಿ ಕುಲಕರ್ಣಿ ಧ್ವಜ ಸ್ವೀಕರಿಸಿದರು.

ನಗರದ ನೆಹರು ಗಂಜ್‌ದಿಂದ ಸಮಾವೇಶದ ಸ್ಥಳ ನೂತನ ವಿದ್ಯಾಲಯವರೆಗೂ ಬೃಹತ್‌ ರ್ಯಾಲಿ ನಡೆಯಿತು. ಲಾಹೋಟಿ ಕಲ್ಯಾಣ ಮಂಟಪದ ಎದುರು ಸಚಿವರಾದ ಎಂ.ಬಿ.ಪಾಟೀಲ, ಬಸವರಾಜ ರಾಯರಡ್ಡಿ, ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಶರಣಪ್ಪ ಮಟ್ಟೂರ ಮುಂತಾದವರು ಚಾಲನೆ ನೀಡಿ ರ್ಯಾಲಿ ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವೇದಿಕೆಯಲ್ಲಿ ನೂರಾರು ಸ್ವಾಮೀಜಿಗಳು, ರಾಜಕೀಯ ಗಣ್ಯರು, ಹಾರಾಡುತ್ತಿರುವ ಬಸವ ಧರ್ಮದ ಧ್ವಜ, ಸಹಸ್ರಾರು ಜನಸಾಗರದ ಸಮಾವೇಶದಲ್ಲಿ ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಸಮಾಜ ಸಂಘಟನೆ ನಿಟ್ಟಿನಲ್ಲಿ ಹೊಸತನ ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next