Advertisement

ತ.ನಾಡು ಬಂದ್‌ ನಿಂದ ಕೆಎಸ್‌ಆರ್‌ಟಿಸಿಗೆ ನಷ್ಟ

03:15 PM Apr 12, 2018 | Team Udayavani |

ಬೆಂಗಳೂರು: “ಕಾವೇರಿ ನೀರು ನಿರ್ವಹಣಾ ಮಂಡಳಿ’ ರಚನೆಗೆ ಒತ್ತಾಯಿಸಿ ನಡೆಯುತ್ತಿರುವ ತಮಿಳುನಾಡು ಬಂದ್‌ನಿಂದಾಗಿ ಕೆಎಸ್‌ಆರ್‌ಟಿಸಿಗೆ ಮತ್ತೆ 19.44 ಲಕ್ಷ ರೂ. ನಷ್ಟವಾಗಿದ್ದು, ಕೇವಲ ಒಂದು ವಾರದ ಅಂತರದಲ್ಲಿ ಆದಾಯದಲ್ಲಿ ಸುಮಾರು 46 ಲಕ್ಷ ರೂ. ಖೋತಾ ಆಗಿದೆ.

Advertisement

ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ 111 ಬಸ್‌ಗಳ ಸಂಚಾರದ್ದಾಗಿದ್ದು, ಆದಾಯದಲ್ಲಿ 19.44 ಕೋಟಿ ನಷ್ಟವಾಗಿದೆ. ಸುಮಾರು ಎಂಟು ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಇದರ ಬಿಸಿ ತಟ್ಟಿದೆ.

ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ ಬೆಂಗಳೂರು ಸೇರಿದಂತೆ ಕೆಎಸ್‌ಆರ್‌ ಟಿಸಿಯ 15 ವಿಭಾಗಗಳಿಂದ ಸುಮಾರು 250ಕ್ಕೂ ಹೆಚ್ಚು ಬಸ್‌ಗಳು ಕರ್ನಾಟಕ-ತಮಿಳುನಾಡು ನಡುವೆ ಕಾರ್ಯಾಚರಣೆ ಮಾಡುತ್ತವೆ. ಆದರೆ, ಬಂದ್‌ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿತು. ಇದರಿಂದ ಸಾವಿರಾರು ಜನ ಪರದಾಡಿದರು.

ಟ್ಟಾರೆ 250 ಅನುಸೂಚಿಗಳ ಪೈಕಿ ಬೆಂಗಳೂರು ನಗರ ಮತ್ತು ರಾಮನಗರ ಸೇರಿದಂತೆ ಎರಡು ವಿಭಾಗಗಳಿಂದಲೇ ತಮಿಳುನಾಡಿಗೆ (ಹಗಲು) 109 ಬಸ್‌ಗಳು ಸಂಚರಿಸುತ್ತವೆ. ಬಂದ್‌ಗೆ ಕರೆ ನೀಡಿರುವುದು ಜನರಿಗೆ ಮೊದಲೇ ಮಾಹಿತಿ ಇದ್ದುದರಿಂದ ಅಷ್ಟಾಗಿ ಸಮಸ್ಯೆ ಆಗಲಿಲ್ಲ. ಆದರೆ, ನಿತ್ಯ ಕೆಲಸ-ಕಾರ್ಯಗಳಿಗೆ ಆ ಮಾರ್ಗಗಳಲ್ಲಿ ತೆರಳುವವರಿಗೆ ಸಮಸ್ಯೆ ಆಗಿರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 5.30ರ ನಂತರ ಬಸ್‌ಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಮರಳಿದೆ. ರಾತ್ರಿ ಪಾಳಿಯಲ್ಲಿ ಅಂದಾಜು 200 ಬಸ್‌ಗಳು ಸಂಚರಿಸುತ್ತವೆ. ಅವೆಲ್ಲವೂ ಪ್ರೀಮಿಯಂ ಸೇವೆಗಳಾಗಿದ್ದು, ಇದರಿಂದ ಹೆಚ್ಚು- ಕಡಿಮೆ 35-36 ಲಕ್ಷ ರೂ. ಆದಾಯ ಬರುತ್ತದೆ. ಬೆಳಿಗ್ಗೆ ಪಾಳಿಯಲ್ಲಿ ಬಹುತೇಕ ಎಲ್ಲವೂ ವೇಗದೂತ ಬಸ್‌ಗಳಾಗಿದ್ದು, 26-28 ಲಕ್ಷ ಆದಾಯ ಬರುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next