Advertisement
ಬೆಂಗಳೂರು, ಕೋಲಾರ, ತುಮಕೂರು ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಹಾಲು ಖರೀದಿ ದರ ಇಳಿಕೆಯಾಗಿದ್ದು, ನಷ್ಟ ಭರ್ತಿಗೆ ಇತರ ಒಕ್ಕೂಟಗಳಲ್ಲೂ ಖರೀದಿ ದರ ಇಳಿಸುವ ಸಾಧ್ಯತೆ ಇದೆ. ದ.ಕ. ಹಾಲು ಒಕ್ಕೂಟ ದರ ಇಳಿಕೆ ಪ್ರಕಟಿಸಿಲ್ಲ. ಸರಕಾರ ರೈತರಿಗೆ ನೀಡುವ ಐದು ರೂ. ಪ್ರೋತ್ಸಾಹ ಧನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಕೆಎಂಎಫ್ ಅಧೀನದಲ್ಲಿರುವ 14 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ 3-4 ಒಕ್ಕೂಟಗಳು ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿದ್ದಾರೆ.
Related Articles
ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆಯಿದ್ದು, ರೈತರಿಂದ ಖರೀದಿಸುವ ಹಾಲಿನ ದರ 25 ರೂ.ನಿಂದ 23 ರೂ.ಗೆ ಇಳಿಕೆಯಾಗಿದೆ. ಮೇ 23ರಂದು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಜೂ.1ರಿಂದ ಜಾರಿಗೆ ಬಂದಿದೆ. ಕೋಲಾರ, ತುಮಕೂರು ಒಕ್ಕೂಟಗಳಲ್ಲಿ 1 ರೂ. ಇಳಿಕೆಯಾಗಿದೆ. ಧಾರವಾಡ, ಬೆಳಗಾವಿ, ಶಿವಮೊಗ್ಗದಲ್ಲಿ 21.50 ರೂ. ಗೆ ಖರೀದಿಸಲಾಗಿದ್ದು, ರಾಜ್ಯದಲ್ಲೇ ಅತಿ ಕಡಿಮೆ ದರ ಎನಿಸಿದೆ.
Advertisement
ಮಾರಾಟ ತಂತ್ರಗಾರಿಕೆ ವೈಫಲ್ಯಕೆಎಂಎಫ್ ಹಾಲು ಗುಣಮಟ್ಟದಿಂದ ಕೂಡಿದ್ದು, ಭಾರೀ ಬೇಡಿಕೆಯಿದೆ. ಆದರೆ ಮಾರುಕಟ್ಟೆ ತಂತ್ರಗಾರಿಕೆ ವೈಫಲ್ಯ, ಹೊಸ ಪ್ರದೇಶಗಳಲ್ಲಿ ವಹಿವಾಟು ವಿಸ್ತರಣೆ, ಹೊಸ ಗ್ರಾಹಕರನ್ನು ಸೆಳೆಯುವ ಕಾರ್ಯದಲ್ಲೂ ಒಕ್ಕೂಟ ಹಿಂದಿದೆ. ನಗರ ಪ್ರದೇಶದ ಅಪಾರ್ಟ್ ಮೆಂಟ್ಗಳು, ಹೊಸ ಬಡಾವಣೆಗಳಲ್ಲಿ ಮಳಿಗೆಗಳನ್ನು ತೆರೆಯುವ ಕಾರ್ಯ ನಡೆಯುತ್ತಿಲ್ಲ. ಹಲವೆಡೆ ಬೆಳಗ್ಗೆ 7 ಗಂಟೆ ನಂತರವೇ ಹಾಲು ಸಿಗದ ಸ್ಥಿತಿ ಇದೆ. ಶುಭ ಸಮಾರಂಭಗಳಿಗೆ ಹಾಲು, ಮೊಸರು, ತುಪ್ಪ, ಐಸ್ಕ್ರೀಮ್ಗಳನ್ನು ಸಕಾಲದಲ್ಲಿ ಪೂರೈಕೆಯಲ್ಲಿನ ವ್ಯತ್ಯಯವೂ ವಹಿವಾಟಿನ ಹಿನ್ನಡೆಗೆ ಕಾರಣವಾಗಿದೆ. ಈ ಲೋಪಗಳನ್ನು ಸರಿಪಡಿಸಿಕೊಂಡು ಮಾರಾಟ ವ್ಯವಸ್ಥೆಯನ್ನು ಸುಧಾರಿಸಿದರೆ ಹೆಚ್ಚಿನ ವಹಿವಾಟು ನಡೆಸಲು ಅವಕಾಶವಿದೆ ಎಂದು ಮೂಲಗಳು ಹೇಳಿವೆ.