ವಿಟ್ಲ: ಕೆಟ್ಟು ನಿಂತಿದ್ದ ಲಾರಿ ಹಠಾತ್ತನೆ ಚಲಿಸಿದ ಪರಿಣಾಮ ಎದುರುಗಡೆ ನಿಲ್ಲಿಸಿದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಸಂಭವಿಸಿದೆ.
ಅಟೋ ರಿಕ್ಷಾದ ಒಳಗಡೆ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಬುಧವಾರ ರಾತ್ರಿ ಲಾರಿ ಕೆಟ್ಟು ಹೋದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿತ್ತು. ಗುರುವಾರ ಬೆಳಗ್ಗೆ ಆಟೋ ರಿಕ್ಷಾದಲ್ಲಿ ಬಂದ ಮೆಕ್ಯಾನಿಕ್ ಲಾರಿ ಮುಂಭಾಗದಲ್ಲಿ ರಿಕ್ಷಾ ನಿಲ್ಲಿ, ದುರಸ್ತಿ ಕಾರ್ಯ ಆರಂಭಿಸಿದ್ದರು.
ಈ ಸಂದರ್ಭ ಲಾರಿ ಗೇರ್ ನ್ಯೂಟ್ರಲ್ ಗೆ ಬಿದ್ದ ಪರಿಣಾಮ ಎದುರುಗಡೆ ಇದ್ದ ರಿಕ್ಷಾಕ್ಕೆ ಗುದ್ದಿದ್ದಲ್ಲದೆ ಅದನ್ನು ದೂಡಿಕೊಂಡು ಹೋಗಿ ಮರಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾದೊಳಗಡೆ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.