Advertisement

20ರಿಂದ ಲಾರಿ ಮುಷ್ಕರ

02:44 PM Jul 08, 2018 | Team Udayavani |

ಬೆಂಗಳೂರು: ಡೀಸೆಲ್‌ ದರ, ಥರ್ಡ್‌ ಪಾರ್ಟಿ ಇನ್ಷೊರನ್ಸ್‌ ಶುಲ್ಕ ಇಳಿಕೆ, ಟೋಲ್‌ ರದ್ಧತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ ಜುಲೈ 20ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿ ಕೂಡ ಇದರ ಬಿಸಿ ತಟ್ಟಲಿದೆ. 

Advertisement

ದೇಶವ್ಯಾಪಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರು ಕೈಜೋಡಿಸಿದ್ದು, ಸುಮಾರು ಆರು ಲಕ್ಷ ಲಾರಿಗಳು ಜು.20ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ಮುಷ್ಕರದಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಹಾರ ಸಾಮಗ್ರಿಗಳು, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಫೆಡರೇಶನ್‌ ಆಫ್ ಕರ್ನಾಟಕ ಲಾರಿ ಓನರ್ ಮತ್ತು ಏಜೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜತೆಗೆ, ಇಂಧನ ಸಾಗಣೆ ಟ್ಯಾಂಕರ್‌, ಪ್ರವಾಸಿ ವಾಹನ, ಮ್ಯಾಕ್ಸಿ ಕ್ಯಾಬ್‌, ಖಾಸಗಿ ಬಸ್‌, ಟೆಂಪೋ ಸೇರಿದಂತೆ ವಾಣಿಜ್ಯ ಸೇವೆಗಳ ವಾಹನಗಳ ಮಾಲಿಕರು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ಮುಷ್ಕರದ ಪರಿಣಾಮ ತುಸು ಜೋರಾಗಲಿದೆ ಎಂದು ಹೇಳಿದರು. ಡೀಸೆಲ್‌ ದರ ಏರಿಕೆಯಾಗುತ್ತಿರುವುದರಿಂದ ಲಾರಿ ಮಾಲಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಗಾಗಿ, ದರ ಇಳಿಕೆ ಮಾಡಿ ದೇಶವ್ಯಾಪಿ ಏಕರೂಪ ದರ ನಿಗದಿ ಮಾಡಬೇಕು. ಥರ್ಡ್‌ ಪಾರ್ಟಿ ಇನ್ಷೊರನ್ಸ್‌ ಪ್ರೀಮಿಯಂ ದರ ಕಡಿತಗೊಳಿಸಬೇಕು. ಇ-ವೇ ಬಿಲ್‌ನಲ್ಲಿ ಉಂಟಾಗಿರುವ ಸಮಸ್ಯೆ ಪರಿಹರಿಸಬೇಕು. ಪ್ರವಾಸಿ ವಾಹನಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next