Advertisement

ಲಾರಿ-ಸ್ಕೂಟರ್‌ ಢಿಕ್ಕಿ: ಸವಾರ ಮೃತ್ಯು

09:15 AM Jun 17, 2020 | mahesh |

ಬಂಟ್ವಾಳ: ಸ್ಕೂಟರ್‌ಹಾಗೂ ಲಾರಿ ಮಧ್ಯೆ ಢಿಕ್ಕಿ ಸಂಭವಿಸಿ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ಮಂಗಳವಾರ ಬಿ.ಸಿ.ರೋಡು ಸರ್ಕಲ್‌ ಬಳಿ ನಡೆದಿದೆ. ಸ್ಕೂಟರ್‌ಸವಾರ ಬಿ.ಸಿ. ರೋಡು ಪೂಂಜರಕೋಡಿ ನಿವಾಸಿ ರಿತೇಶ್‌(30) ಮೃತಪಟ್ಟ ದುರ್ದೈವಿ. ಅವರು ಕೇಬಲ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದು, ಮನೆಗೆ ಹಿಂದಿರುಗುವ ವೇಳೆ ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next