Advertisement

ಲಾರಿಗೆ ಕಾರು ಢಿಕ್ಕಿ: ಓರ್ವ ಸಾವು, ಐವರಿಗೆ ಗಾಯ

09:55 AM Jun 01, 2020 | mahesh |

ಮಂಗಳೂರು: ನಗರದ ಹೊರವಲಯದ ಕಲ್ಲಾಪುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ (ಉಳ್ಳಾಲ ಸೇತುವೆ ಸಮೀಪ) ರವಿವಾರ ಮುಂಜಾನೆ ಕಾರೊಂದು ರಸ್ತೆ ಬದಿ ನಿಂತಿದ್ದ ಕಂಟೈನರ್‌ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಕಾವೂರು ಗಾಂಧಿ ನಗರದ ನಿವಾಸಿ ಚೇತನ್‌ (21) ಸಾವನ್ನಪ್ಪಿದ್ದು, ಇತರ 5 ಮಂದಿ ಗಾಯಗೊಂಡಿದ್ದಾರೆ.

Advertisement

ಬಿ.ಸಿ. ರೋಡ್‌ನ‌ ರಾಕೇಶ್‌ (24), ಮಂಗಳೂರು ಕಾರ್‌ಸ್ಟ್ರೀಟ್‌ನಪ್ರೀತಮ್‌ (18), ಕಾವೂರು ಗಾಂಧಿ ನಗರದ ಪ್ರತ್ಯುಶ್‌ (21), ಸ್ವರೂಪ್‌ (18) ಮತ್ತು ಅರುಣ್‌ ಗಟ್ಟಿ (18) ಗಾಯಗೊಂಡವರು. ಕಾರಿನಲ್ಲಿದ್ದ ಚೇತನ್‌ ಮತ್ತಿತರರು ತಲಪಾಡಿಯ ತಮ್ಮ ಸಂಬಂಧಿಕರ ಮನೆಯಲ್ಲಿ ಶನಿವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದು, ಮುಂಜಾನೆ ವೇಳೆಗೆ ಅವರು ಮಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ 5 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.

ನಿಯಂತ್ರಣ ತಪ್ಪಿ ಅಪಘಾತ
ಕೇರಳ ಭಾಗದಿಂದ ಮಂಗಳೂರು ಕಡೆ ಹೋಗುತ್ತಿದ್ದ ಕಂಟೈನರ್‌ ಲಾರಿಯನ್ನು ಡೀಸೆಲ್‌ ಮುಗಿದ ಕಾರಣ ಕಲ್ಲಾಪುವಿನಲ್ಲಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಚೇತನ್‌ ವೇಗವಾಗಿ ಚಲಾಯಿಸಿದ್ದು, ಕಲ್ಲಾಪು ರಸ್ತೆ ಬದಿ ಇದ್ದ ಕಂಟೈನರ್‌ ಲಾರಿಯ ಸಮೀಪ ತಲುಪಿದಾಗ ನಿಯಂತ್ರಣ ತಪ್ಪಿ ನೇರವಾಗಿ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದ್ದು, ಚಾಲಕ ಚೇತನ್‌ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ನಗರ ಟ್ರಾಫಿಕ್‌ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next