Advertisement

2019ರ ಚುನಾವಣೆ ಗೆಲ್ಲಲು ಬಿಜೆಪಿಗೆ ಶ್ರೀರಾಮ ನೆರವಾಗಲಾರ: ಫಾರೂಕ್‌

04:09 PM Nov 01, 2018 | Team Udayavani |

ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿ ನಿರ್ಮಿಸುವ ಕುರಿತಾದ ವಿವಾದ ಸಾಗುತ್ತಿರುವ ನಡುವೆಯೇ ಬಿಜೆಪಿ ವಿರುದ್ಧ ವಾಕ್‌ ದಾಳಿ ನಡೆಸಿರುವ ನ್ಯಾಶನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲ ಅವರು “2019ರ ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ಬಿಜೆಪಿಗೆ ಶ್ರೀರಾಮನು ಸಹಾಯ ಮಾಡುವುದಿಲ್ಲ’ ಎಂದು ಟೀಕಿಸಿದ್ದಾರೆ. 

Advertisement

2019ರ ಲೋಕಸಭಾ ಚುನಾವಣೆಗೆ ಮುನ್ನ ದೇಶವನ್ನು ರಾಮ ಮಂದಿರ – ಬಾಬರಿ ಮಸೀದಿ ವಿಷಯದಲ್ಲಿ ವಿಭಜಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಅನೇಕ ವಿರೋಧ ಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ಫಾರೂಕ್‌ ಅಬ್ದುಲ್ಲ ಅವರು ಈ ಮಾತನ್ನು ಆಡಿರುವುದು ಗಮನಾರ್ಹವಾಗಿದೆ. 

“ಚುನಾವಣೆಯಲ್ಲಿ ಮತ ಚಲಾಯಿಸುವವರು ಜನರೇ ವಿನಾ ಭಗವಾನ್‌ ರಾಮ ಅಥವಾ ಅಲ್ಲಾಹು ಅಲ್ಲ; ಅಂತೆಯೇ ಬಿಜೆಪಿಗೆ ಚುನಾವಣೆಯನ್ನು ಗೆಲ್ಲುವುದಕ್ಕೆ  ಶ್ರೀರಾಮ ನೆರವಾಗುವುದಿಲ್ಲ’ ಎಂದು ಫಾರೂಕ್‌ ಹೇಳಿದರು. 

ಕಳೆದ ವಾರ ಸುಪ್ರೀಂ ಕೋರ್ಟ್‌ ರಾಮಜನ್ಮ ಭೂಮಿ – ಬಾಬರಿ ಮಸೀದಿ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next